ಮಾಜಿ ಪ್ರಧಾನಿ, ಕವಿ ವಾಜಪೇಯಿ ನಿಧನಕ್ಕೆ ಮರುಗಿದ ಬಾಲಿವುಡ್
ಮುಂಬಯಿ : 93ರ ಹರೆಯದಲ್ಲಿ ಇಂದು ಅಸ್ತಂಗತರಾದ ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಬಾಲಿವುಡ್ ಮರುಗಿದೆ.
ಬಾಲಿವುಡ್ ಗಾನ ಕೋಗಿಲೆ ಎಂದೇ ಖ್ಯಾತಿವೆತ್ತಿರುವ ಭಾರತ ರತ್ನ ಲತಾ ಮಂಗೇಶ್ಕರ್ ಅವರು "ನನ್ನ ತಂದೆ ನಿಧನ ಹೊಂದಿದ್ದಾಗ ನನಗೆ ಎಷ್ಟು ನೋವಾಗಿತ್ತೋ ಅಷ್ಟೇ ನೋವು ಈಗ ವಾಜಪೇಯಿ ನಿಧನದಿಂದ ಆಗಿದೆ' ಎಂದು ದುಃಖೀಸಿದ್ದಾರೆ.ಅಗಲಿದ ವಾಜಪೇಯಿ ಅವರ ಆತ್ಮಕ್ಕೆ ಭಗವಂತನು ಚಿರ ಶಾಂತಿ ಕರುಣಿಸಲೆಂದು ಪ್ರಾಥರ್ಿಸುತ್ತೇನೆ ಎಂದು ಹೇಳಿದ್ದಾರೆ.
ತಮಿಳು ಮೆಗಾಸ್ಟಾರ್ ರಜನಿಕಾಂತ್ ಅವರು ವಾಜಪೇಯಿ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ವಾಜಪೇಯಿ ನಿಧನದೊಂದಿಗೆ ಒಂದು ಯುಗವೇ ಅಂತ್ಯಗೊಂಡಿತು ಎಂದು ಲೇಖಕ ನಟ ಸುಹೇಲ್ ಸೇಟ್ ಹೇಳಿದ್ದಾರೆ.
ವಾಜಪೇಯಿ ಅವರಂತೆ ನಮ್ಮ ಎಲ್ಲ ಹಿರಿಯರು, ನಾಯಕರು ಇರಬೇಕೆಂದು ನಾವು ಸದಾ ಇಷ್ಟಪಡುತ್ತೇವೆ; ಅಂತಹ ಮಹೋನ್ನತ ವ್ಯಕ್ತಿ ತೀರಿಕೊಂಡದ್ದಕ್ಕೆ ದುಃಖವಾಗಿದೆ' ಎಂದು ಸೋನಾ ಮೋಹಪಾತ್ರ ಹೇಳಿದ್ದಾರೆ.
ಖ್ಯಾತ ಲೇಖಕ ಚೇತನ್ ಭಗತ್, ನಟ ಬೋಮನ್ ಇರಾನಿ, ವಿವೇಕ್ ಆನಂದ್ ಒಬೆರಾಯ್, ಧನುಷ್, ರಣದೀಪ್ ಹೂಡ, ಕೈಲಾಶ್ ಖೇರ್ ಮೊದಲಾದವರು ವಾಜಪೇಯಿ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 