ಜಾತಿ ಮತ ಪಂಥ ಭೇದ ಮರೆತು ನಿಂತು ಎಲ್ಲ ಧರ್ಮೀಯರಿಗೆ ಆದಿ ಗುರು ರೇಣುಕಾಚಾರ್ಯರು
Forgetting caste, creed, and creed, Renukacharya is the first Guru for all religions
ಯರಗಟ್ಟಿ 01: ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮ ಉದ್ದೇಶಿಸಿ ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಜಾತಿ ಮತ ಪಂಥ ಭೇದ ಎಲ್ಲವನ್ನು ಮರೆತು ನಿಂತು ಎಲ್ಲ ಧರ್ಮೀಯರಿಗೆ ಆದಿ ಗುರುವಾಗಿರುವರು ಎಂದರು.ಸಮಾಜದ ಹಿರಿಯರಾದ ಕುಮಾರ ಹಿರೇಮಠ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು 18 ಪಂಗಡಗಳಿಗೆ ಜಗದ್ಗುರು ವಾಗಿದ್ದು ಮಾನವ ಧರ್ಮ ಒಂದೇ ಎಂದು ಸಾರುವ ಮೂಲಕ ಎಲ್ಲಾ ಧರ್ಮೀಯರಿಗೆ ಮಂತ್ರೋಪದೇಶ ಪಠಿಸಲು ಅವಕಾಶ ನೀಡಿದವರು ಜಗದ್ಗುರು ರೇಣುಕಾಚಾರ್ಯರು ಎಂದು ಪ್ರತಿಪಾದಿಸಿದರು. ಈ ವೇಳೆ ಶಾಂತಯ್ಯ ಹಿರೇಮಠ, ದೀಪಕ ತೋರಗಲ್ಲಮಠ, ಈರಯ್ಯ ಹಿರೇಮಠ, ರುದ್ರಯ್ಯ ಹಿರೇಮಠ, ಈರಯ್ಯ ಗೌಡರ, ಜಗದೀಶ ಹೊಸಮಠ, ಈರಯ್ಯ ಮಠಪತಿ, ಗುರುಪಾದಯ್ಯ ಮಾಸ್ತಮರಡಿ, ಪ್ರಸನ್ನಶಾಸ್ತ್ರಿ ಹಿರೇಮಠ, ಮಲ್ಲಿಕಾರ್ಜುನ ಹಿರೇಮಠ, ವಿನಯಕುಮಾರ ಹಿರೇಮಠ, ಬಾಳಯ್ಯ ಮಾಸ್ತಮರಡಿ, ಗುರುಪುತ್ರಯ್ಯ ಹೂಗಾರ, ಬಸಯ್ಯ ಪತ್ರಿಗಿಡದ, ಈರಣ್ಣಾ ಮಠಪತಿ, ಈರಣ್ಣಾ ಪೂಜೇರ, ಬಸಯ್ಯ ಹಿರೇಮಠ, ಶಿವಾನಂದ ಕರ್ಜಿಗಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 