ಶ್ರೀವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗೆ ಕ್ಷೇತ್ರ ಪ್ರವಾಸ

ಶ್ರೀವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗೆ ಕ್ಷೇತ್ರ ಪ್ರವಾಸ Field trip for a student of Sri Vidyaniketan Public School

ಗಂಗಾವತಿ 24: ತಾಲ್ಲೂಕಿನ ಶ್ರೀರಾಮನಗರದ ಶ್ರೀವಿದ್ಯಾನಿಕೇತನ ಪಬ್ಲಿಕ್ ಶಾಲೆಯು ಅನುಭವ ಜನ್ಯ ಕಲಿಕಾ ಪ್ರಕ್ರಿಯೆಯ ಭಾಗವಾಗಿ 6 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಕ್ಷೇತ್ರ ಪ್ರವಾಸವನ್ನು ಆಯೋಜಿಸಿತ್ತು. 

 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳನ್ನು ಕಾರಟಗಿಯ ಕೇಸರಿ ಆಗ್ರೋ ಇಂಡಸ್ಟ್ರೀಸ್ (ರೈಸ್‌ಮಿಲ್) ಹಾಗೂ 9ನೇ ತರಗತಿ ವಿದ್ಯಾರ್ಥಿಗಳನ್ನು ವಿಜಯಲಕ್ಷ್ಮೀಆಗ್ರೋ ಇಂಡಸ್ಟ್ರೀಸ್ (ರೈಸ್‌ಮಿಲ್)ಗೆ ಕರೆದುಕೊಂಡು ಹೋಗಲಾಯಿತು.  

ಭತ್ತವನ್ನು ಅಕ್ಕಿಯನ್ನಾಗಿ ರೂಪಿಸುವ ಸಂಪೂರ್ಣ ಪ್ರಕ್ರಿಯೆಯ ವಿವಿಧ ಹಂತಗಳು ಹಾಗೂ ವಿವಿಧ ಯಂತ್ರೋಪಕರಣಗಳ ಬಳಕೆ ಹಾಗೂ ಕಾರ್ಯ ನಿರ್ವಹಿಸುವ ವಿಧಾನ ಮತ್ತು ಸಿಬ್ಬಂದಿಗಳ ಕಾರ್ಯನಿರ್ವಹಣೆ, ಡಿಜಿಟಲ್ ತಂತ್ರಜ್ಞಾನ ಅಳವಡಿಕೆ ಮೊದಲಾದ ವಿಷಯಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಂಡರು. 

ಶಾಲೆಯ ಶೈಕ್ಷಣಿಕ ಮುಖ್ಯಸ್ಥರಾದ ಕೃಷ್ಣವೇಣಿಎಸ್, ಕ್ಯಾಂಪಸ್ ಮ್ಯಾನೇಜರ್‌ಶ್ರೀ ಜಿ ನಾಗೇಶ್ವರ್‌ರಾವ್ ಮತ್ತು ಮಂಜುನಾಥ ಅವರುಎಲ್ಲ ವಿದ್ಯಾರ್ಥಿಗಳಿಗೆ ರೈಸ್‌ಮಿಲ್‌ನ ಸಂಪೂರ್ಣ ಕಾರ್ಯಚಟುವಟಿಕೆಯ ಕುರಿತು ವಿವಿಧ ರೀತಿಯ ಮಾಹಿತಿ ಮತ್ತು ವಿವರಣೆಯನ್ನು ನೀಡಿದರು. 

ಈ ಸಂದರ್ಭದಲ್ಲಿ ಕೇಸರಿ ಆಗ್ರೋ ಇಂಡಸ್ಟ್ರೀಸ್‌ನ ಮಾಲೀಕರಾದ ಮನ್ನೆ ಕೃಷ್ಣಮೂರ್ತಿ ಮತ್ತು ಕುಟುಂಬ ವರ್ಗ ಹಾಗೂ ಸಿಬ್ಬಂದಿಗಳು, ಅದೇ ರೀತಿ ವಿಜಯಲಕ್ಷ್ಮೀ ಆಗ್ರೋ ಇಂಡಸ್ಟ್ರೀಸ್‌ನ ಮಾಲೀಕರಾದ ಶ್ರೀ ಸಿ. ಹೆಚ್‌. ನಾಗೇಶ್ವರ್‌ರಾವ್ ಮತ್ತು ಕುಟುಂಬ ವರ್ಗ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಸಮರ​‍್ಕ ಮಾಹಿತಿ ಹಾಗೂ ವಿವರಣೆಯನ್ನು ನೀಡಿದರು.ಶಾಲಾ ಶಿಕ್ಷಕ ಮತ್ತು ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.