ನೂತನ ಚಾಲಕ, ನಿರ್ವಾಹಕರಿಗೆ ಸನ್ಮಾನ

ನೂತನ ಚಾಲಕ, ನಿರ್ವಾಹಕರಿಗೆ ಸನ್ಮಾನ  Felicitation of new drivers and conductors

ಯಮಕನಮರಡಿ 9: ಸ್ಥಳೀಯ ಸುಕ್ಷೇತ್ರ ಮುನಿಸಿಕೊಂಡ ಮಠದ ಉತ್ತರಾಧಿಕಾರಿಗಳಾದ ಸಿದ್ಧಬಸವ ದೇವರು ನೂತನವಾಗಿ ಆಗಮಿಸಿದ ಬೆಳಗಕುದ್ದಾಪುರ ಬಸ್ಗೆ ಪೂಜೆ ನೆರವೇರಿಸಿ, ಚಾಲಕ ಹಾಗೂ ನಿರ್ವಾಹಕರನ್ನು ಆತ್ಮೀಯವಾಗಿ ಸನ್ಮಾನಿಸಿದರು.  ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಗೀರೀಶ್ ಮೀಶ್ರೀಕೋಟಿ, ದೇವಪ್ಪ ಜಿನರಾಳಿ, ಈರಣ್ಣ ಗೋರವ, ರಾಜು ಮಿಶ್ರೀಕೋಟಿ, ಸಿದ್ದು ಜುಟ್ಟಿ, ಅಶೋಕ ದುಗ್ಗಾಣಿ, ರಾಜು ಗರಗಟ್ಟಿ, ತುಬಚಿ, ಹಿರೇಮಠ, ರಜಪೂತ, ಕಲ್ಲೋಳಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.  ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಿ, ಬಸ್ಗೆ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಬಸ್ ಸಿಬ್ಬಂದಿ ಹಾಗೂ ಗ್ರಾಮಸ್ಥರು ಪರಸ್ಪರ ಆತ್ಮೀಯವಾಗಿ ಅಭಿನಂದಿಸಿಕೊಂಡರು.