ಪ್ರಸಿದ್ಧ ಪುರಾತನ ಶಂಕರಲಿಂಗ ಮಠ

Famous ancient Shankaralinga Math

ಪ್ರಸಿದ್ಧ ಪುರಾತನ ಶಂಕರಲಿಂಗ ಮಠ 

ಸಂಕೇಶ್ವರದ ಹಿರಣ್ಯಕೇಶಿ ನದಿ ದಡದಲ್ಲಿರುವ ಪುರಾತನ ಕಾಲದಿಂದಲೂ ಪ್ರಸಿದ್ಧಿ ಪಡೆದುಕೊಂಡಿರುವ ಶಂಕರಲಿಂಗ ಮಠವು ಸುಮಾರು 1000 ವರ್ಷಗಳ ಹಿಂದೆ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಈ ದೇವಾಲಯವು ಗೋಡೆಯ ಆವರಣದಲ್ಲಿ ದೊಡ್ಡ ಪ್ರದೇಶದಲ್ಲಿ ನಿರ್ಮಿಸಲಾಗಿದೆ.  ಆಗಿನ ರಟ್ಟರ ಕಾಲದಲ್ಲಿ ಜಕಣಾಚಾರ್ಯರು ಶಿಲ್ಪಿಗಳು ಇವರು ಮುಖ್ಯ ಶಂಕರ ಮಂದಿರ ಹೇಮಾಡಪಂಥಿ ಮಂದಿರ ಮತ್ತು ನಾರಾಯಣ ಮಂದಿರ ಸ್ಥಾಪನೆಗೊಂಡಿವೆ. ದೈವ ಸ್ವರೂಪಿ ಹಾಗೂ ಶಕ್ತಿಯುತ ಶಿಲ್ಪಿಗಳು ಇದ್ದರು.  ಕ್ರಿ.ಶ. 1499 ರಲ್ಲಿ ಶಂಕರಾಚಾರ್ಯ ಮಠದ ಪರಂಪರೆಯು ಆರಂಭಗೊಂಡಿತು.  ಶೃಂಗೇರಿ ಮಠದ ಸ್ವಾಮಿಗಳು ತಮ್ಮ ಶಿಷ್ಯರೊಂದಿಗೆ ಹಿಮಾಲಯ ಪರ್ವತದ ಕಡೆಗೆ ಸಾಗಿ ಹಿಮಾಲಯದಲ್ಲಿ ತಪಸ್ಸು ಮಾಡುವವರಿದ್ದು ತಮ್ಮ ಶಿಷ್ಯರಿಗೆ 1 ವರ್ಷ ನನ್ನ ದಾರಿ ಕಾಯಬೇಕೆಂದು ಅದಕ್ಕಾಗಿ ಶಿಷ್ಯರೆಲ್ಲರೂ ಶೃಂಗೇರಿ ಮಠಕ್ಕೆ ಮರಳಿ ಹೋಗಬೇಕೆಂದು ಹೇಳಿದರು.  ಶೃಂಗೇರಿ ಮಠದ ದಾರಿ ಕಾದ ಶಿಷ್ಯರು ಹಿರಿಯ ಶಿಷ್ಯರಿಗೆ ಶೃಂಗೇರಿ ಪೀಠಕ್ಕೆ ಪಟ್ಟಾಭಿಷೇಕ ಮಾಡಿದರು.  ಶೃಂಗೇರಿಯ ಸ್ವಾಮಿಗಳು ಹಿಮಾಲಯದಲ್ಲಿ ತಪಸ್ಸು ಮಾಡಿ ಮರಳಿ ಶೃಂಗೇರಿ ಪೀಠಕ್ಕೆ ಬಂದರು. ಶೃಂಗೇರಿ ಮಠದಲ್ಲಿ ಧರ್ಮಶಾಸ್ತ್ರ ಸಭೆ ಸೇರಿ ಆ ಸಭೆಯಲ್ಲಿ ತಾವು ಅಧಿಕಾರವನ್ನು ಕಳೆದುಕೊಂಡಿದ್ದೀರಿ ಮಠವನ್ನು ತ್ಯಜಿಸಿ ಸಂಕೇಶ್ವರದ ಸುತ್ತಮುತ್ತಲಿನ ಹರಗಾಪೂರ ಗಡದಲ್ಲಿ ಹರಗಮ್ಮಾ ದೇವಿಯ ಮುಂದೆ ತಪಸ್ಸು ಮಾಡಿದರು.  ದೇವಿಯ ಸಾಕ್ಷಾತ್ಕಾರವಾಗಿ ಪ್ರಸನ್ನಳಾದಳು.  ತಾವು ಸಂಕೇಶ್ವರ ಮಠಕ್ಕೆ ಹೋಗಿ ಅಲ್ಲಿ ತಪಸ್ಸು ಮಾಡಿ ತಮ್ಮ ಧರ್ಮ ಪರಂಪರೆಯನ್ನು ಹೊಸದಾಗಿ ಆರಂಭಿಸಿ ಉದ್ಭವ ಶಿವಲಿಂಗ ಮೂರ್ತಿಯ ಕೆಳಗೆ ತ್ರಿಚಕ್ರ ಇರುತ್ತದೆ.  12 ಜ್ಯೋತಿರ್ಲಿಂಗಗಲ್ಲಿ ಇದು ವಿಶಿಷ್ಟವಾಗಿದೆ. ಬಿಜಾಪೂರದ ಆದಿಲಶಾಹಿ ಸರದಾರ ರಣದುಲ್ಲಾಖಾನ ಕೋಕಣ ಭಾಗದಲ್ಲಿ ಪ್ರವಾಸ ಕೈಗೊಂಡಿದ್ದಾಗ ಸಂಕೇಶ್ವರ ಮಠಕ್ಕೆ ಬಂದಾಗ ಶಂಕರಾಚಾರ್ಯ ದೇವಗೋಸಾವಿ ಸ್ವಾಮಿಜೀ ಇವರಿಗೆ ಅಂಕಲಿ ಕಮತನೂರ ಸಂಕೇಶ್ವರ 3 ಗ್ರಾಮಗಳನ್ನು ಮಠಕ್ಕೆ ದಾನವಾಗಿ ನೀಡಿದರು.  1000 ವರ್ಷಗಳ ಇತಿಹಾಸವನ್ನು ಹೊಂದಿದ ಶಂಕರಲಿಂಗ ಮಠದ ಪರಂಪರೆ ಇರುತ್ತದೆ.  ಮುಂಬಯಿ ಪ್ರಾಂತ್ಯದ ಗೆಜೆಟೀಯರ್‌ನಲ್ಲಿಯೂ ಕೂಡ ಈ ವಿಷಯದ ಪ್ರಸ್ತಾಪನೆಗೊಂಡಿರುತ್ತದೆ.   

ಶಂಕರಲಿಂಗ ಮಠದಲ್ಲಿ ಮೊದಲು ಹನುಮಾನ ಮಂದಿರ, ಗಣಪತಿ ಮಂದಿರ, ಅನ್ನಪೂರ್ಣೇಶ್ವರಿ ದೇವಿ ಮೂರ್ತಿ, ಮಹಾಕಾಲ ಭೈರವ, ಗರ್ಭಗುಡಿಯಲ್ಲಿ ಶಿವಲಿಂಗ ಮಂದಿರ ಹಾಗೂ ಶಿವಲಿಂಗ ಮೂರ್ತಿಯ ಎದುರುಗಡೆ ನಂದಿ ಪ್ರತಿಷ್ಠಾಪನೆಯಾಗಿದೆ.  ಗರ್ಭಗುಡಿಯಲ್ಲಿ ಮೇಲೆ ನಾಗಲೋಕವನ್ನು ಶಿಲ್ಪದಲ್ಲಿ ಕೆತ್ತಲಾಗಿದೆ.  ದತ್ತ ಮಂದಿರ, ಪಶುಪತಿನಾಥ ಮೂರ್ತಿ, ಬಸವಣ್ಣನ ಮೂರ್ತಿ, ಜಗನ್ಮಾತೆ ಮೂರ್ತಿ, ವೀರಭದ್ರ ಮೂರ್ತಿ, ಶಾರದಂಬಾ ದೇವಿಯ ಮಂದಿರದಲ್ಲಿ ರಾಮ ಲಕ್ಷ್ಮಣ ಸೀತಾ ಆಂಜನೇಯ ಮೂರ್ತಿಗಳು, ಲೋಕಪಾಲಕ ವಿಷ್ಣುದೇವರ ಮೂರ್ತಿ, ಪಂಚಲಿಂಗೇಶ್ವರ ಶಿವಾಲಯ ಮಂದಿರ, ಹಿರಣ್ಯಕೇಶಿ ದಡದಲ್ಲಿರುವ ಪ್ರಾಚೀನ ಕಾಲದ ಅತ್ತಿಮರದ ಕೆಳಗೆ ಗಣಪತಿ, ಶಿವಲಿಂಗ, ಬ್ರಹ್ಮ ವಿಷ್ಣು ಮಹೇಶ್ವರ ಮೂರ್ತಿಗಳು ಸ್ಥಾಪನೆಗೊಂಡಿದ್ದು, ಅತ್ತಿ ಮರವು ಖ್ಯಾತಿ ಹೊಂದಿದೆ.  ಮಠದ ಪೀಠಾಧಿಪತಿಗಳಾಗಿದ್ದ 4 ಮಹಾಸ್ವಾಮಿಗಳು ಸಮಾಧಿಗಳು ಇಲ್ಲಿ ಕಂಡು ಬರುತ್ತವೆ.  ಇದರಲ್ಲಿ ಜೀವಂತ ಸಮಾಧಿ ಪಡೆದುಕೊಂಡಿರುವ ದೇವಗೋಸಾವಿ ಸ್ವಾಮಿಗಳ ಸಮಾಧಿಯು ಕೂಡ ಒಂದು ಇರುತ್ತದೆ.  ಈ ಶಂಕರಲಿಂಗ ಶಂಕರಾಚಾರ್ಯ ಮಠವು ಬಹಳ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.  ಇಲ್ಲಿ ವಿದ್ಯಾಶಂಕರ ಭಾರತಿ, ವಾಡಿಕ ಜೇರೆ, ಕವಟೇಕರ್,ಕಾಸೀಕರ, ಕರ್ಕಿ ಸ್ವಾಮಿಗಳು, ಕಲ್ಯಾಣ ಸೇವಕ ಮಹಾರಾಜ, ಎರಂಡೆ ವಿದ್ಯಾ ನರಸಿಂಹ ಭಾರತಿ ಶಿರೋಳಕರ ಸ್ವಾಮಿಗಳು, ವಾಹೀಕರ ಅಥಣಿಕರ ಮೊದಲಾದ ಅನೇಕ ಶ್ರೀಗಳು ಮಠದ ಪೀಠವನ್ನು ಅಲಂಕರಿಸಿದ್ದವರಾಗಿದ್ದಾರೆ.  1796 ರಲ್ಲಿ ಇಲ್ಲಿಯ ಮಠಕ್ಕೆ ರಥವನ್ನು ನಿರ್ಮಾಣ ಮಾಡಲಾಯಿತು.  ಸಂಪೂರ್ಣ ಕಟ್ಟಿಗೆಯಿಂದ ತಯಾರಿಸಲಾದ ಭವ್ಯ ರಥವು ವಿಶಾಲವಾದ ಚಕ್ರಗಳನ್ನು ಹೊಂದಿದೆ. ರಥಕ್ಕೆ ಸುಮಾರು 40 ಮೆಟ್ಟಿಲುಗಳು, 30 ಫೂಟು ರಥವು 70 ಫೂಟು ಎತ್ತರದ ರಥ ಇದಾಗಿರುತ್ತದೆ.  ಶಂಕರಲಿಂಗ ಮಠದ ಮುಖ್ಯ ಬೀದಿಯಲ್ಲಿ ಪ್ರಾಚೀನ ಕಾಲದ ನಾರಾಯಣ ಮಂದಿರ ಇದ್ದು, ಹರಿಹರ ಶಿವ ಸ್ವರೂಪಿ ಪಡೆದುಕೊಂಡಿರುತ್ತದೆ. ಸಾಂಗಲಿಯ ಸಂಸ್ಥಾನದ ಅರಸು ಪಟವರ್ಧನ ಆಗಿನ ಕಾಲದಲ್ಲಿ ಆರ್ಥಿಕ ನೆರವು ನೀಡಿದ್ದಾರೆ.  ಕಟ್ಟಿಗೆಯಿಂದ ನಿರ್ಮಿಸಲಾಗಿರುವ ರಥವು ಅತಿ ಭಾರವಾಗಿದ್ದು ಶಕ್ತಿಯುತವಾಗಿದೆ.  ಪಾರ್ವತಿದೇವಿಯ ಅವತಾರ ಶ್ರೀ ಬನಶಂಕರಿ ದೇವಿಯ ದೇವಸ್ಥಾನವು ಇಲ್ಲಿಯೇ ಇದ್ದು ಖ್ಯಾತಿಯನ್ನು ಪಡೆದುಕೊಂಡಿದೆ.  ಕಳೆದ 8 ವರ್ಷಗಳಿಂದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮಿಗಳು ಇವರಿಗೆ ಪಟ್ಟಾಭಿಷೇಕ ಮಾಡಲಾಗಿದೆ. ಇವರು ಮಠದ ಪೀಠಾಧಿಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರ ಕಾಲದಲ್ಲಿ ಮಠವು ಸಾಕಷ್ಟು ಅಭಿವೃದ್ಧಿಯನ್ನು ಹೊಂದಿರುತ್ತದೆ ದಿನಂಪ್ರತಿ 3 ಗಂಟೆಗಳ ಕಾಲ ಶಾರದಂಬಾದೇವಿಯ ಮುಂದೆ ಕುಳಿತು ಧ್ಯಾನ, ಮಂತ್ರಪಠಣೆ ಮಾಡುತ್ತಾರೆ.  ಇಲ್ಲಿಯ ಮಠದ ಮಹಾ ಸತ್ಪುರುಷರಾಗಿದ್ದು, ಹಿಂದಿನ ಪೀಠಾಧಿಪತಿಗಳಾದ ಕಲ್ಯಾಣಸೇವಕ ಮಹಾರಾಜರು ಜ್ಯೋತಿಷ್ಯ ಶಾಸ್ತ್ರ ಪಂಡಿತರಾಗಿದ್ದರು, ಸಮಾಧಿ ಪಡೆದ ಇವರ ಪಾದುಕೆಗಳು ಸಮಾಧಿ ಸ್ಥಳದಲ್ಲಿ ಇರುತ್ತವೆ.  ಹಿಂದಿನ ಎರಂಡೆ ಸ್ವಾಮಿಗಳು ಕೂಡ ಸಂಸ್ಕೃತ ಮತ್ತು ಹಿಂದಿ ಭಾಷಾ ಪಂಡಿತ ಪ್ರವೀಣರಾಗಿದ್ದರು. ಇವರು ಕೇವಲ ಒಂದು ಲೋಟ ಹಾಲು ಮತ್ತು ಬಾಳೆಹಣ್ಣು ಮಾತ್ರ ಸೇವನೆ ಮಾಡುತ್ತಿದ್ದರು.  ಯಾರಿಂದಲೂ ದೇಣಿಗೆಯನ್ನು ಸ್ವೀಕರಿಸುತ್ತಿರಲಿಲ್ಲ ಹಣವನ್ನು ಮುಟ್ಟುತ್ತಿರಲಿಲ್ಲ.  ಶಂಕರಲಿಂಗ ಮಂದಿರದಲ್ಲಿ ಇರುವ ತುಳಸಿಗಿಡದ ಹತ್ತಿರವಿರುವ ಸುರಂಗ ಮಾರ್ಗವು ಹರಗಾಪೂರ ಗಡದಲ್ಲಿರುವ ಹರಗಮ್ಮಾ ದೇವಾಲಯದವರೆಗೆ ಭೂಮಿಯ ಒಳಗೆ ಇರುವ ಸುಮಾರು 3 ಕಿಮೀ ಸುರಂಗ ಮಾರ್ಗದ ಮೂಲಕ ಹೋಗಿ ಬರುತ್ತ್ತಿದ್ದರು.  ಒಳಗೆ ಕತ್ತಲು ಆವರಿಸಿದ್ದು, ಗುಂಗಿ ಹುಳಗಳು ಜೇನು ಹುಳಗಳು ತುಂಬಿಕೊಂಡಿದ್ದು, ಸತ್ಪುರುಷರು ಮಾತ್ರ ಇಲ್ಲಿಗೆ ಹೋಗಬಹುದಾಗಿತ್ತು ಸ್ವಾಮಿಗಳು ದೀವಟಿಗೆಯನ್ನು ಹಿಡಿದುಕೊಂಡು ಹೋಗಿ ಅಲ್ಲಿ ದೇವಿಗೆ ಪೂಜೆ ಸಲ್ಲಿಸಿ ಬರುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ.