ಅತಿ ಮೊಬೈಲ್ ಫೋನ್ ಬಳಕೆ ಆರೋಗ್ಯಕ್ಕೆ ಮಾರಕ: ತುಷಾರ ಕುಲಕರ್ಣಿ
Excessive mobile phone use is harmful to health: Thushara Kulkarni
ಲೋಕದರ್ಶನ ವರದಿ
ಅತಿ ಮೊಬೈಲ್ ಫೋನ್ ಬಳಕೆ ಆರೋಗ್ಯಕ್ಕೆ ಮಾರಕ: ತುಷಾರ ಕುಲಕರ್ಣಿ
ಬೆಳಗಾವಿ 24: ಇತ್ತೀಚಿನ ದಿನಗಳಲ್ಲಿ ಯುವಕರು ಮೊಬೈಲ್ನ್ನು ಅತಿಯಾಗಿ ಬಳಸುತ್ತಿದ್ದಾರೆ. ಮೋಬೈಲ್ ಇಲ್ಲದೆ ಒಂದು ನಿಮಿಷ ಕೂಡ ಇರುವುದು ಇಂದಿನವರಿಗೆ ಕಷ್ಟವೆನಿಸುತ್ತಿದೆ. ಆದರೆ ಇದು ಯುವ ಜನಾಂಗದ ಆರೋಗ್ಯಕ್ಕೆ ಮಾರಕವಾಗಿದೆ ಎಂದು ತುಷಾರ್ ಎಸ್. ಕುಲಕರ್ಣಿ ಕಳವಳ ವ್ಯಕ್ತಪಡಿಸಿದರು.
ಎಸ್.ಜಿ.ಬಿ.ಐ.ಟಿ.ಯ ಕಾಯಕ ಕ್ಲಬ್, ಬೆಳಗಾವಿಯ ಎಸ್.ಜಿ. ಬಾಳೇಕುಂದ್ರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳಿಗಾಗಿ ದಿ. 23ರಂದು ಸಂಬರಗಿಮಠ ಸೆಮಿನಾರ್ ಹಾಲ್ನಲ್ಲಿ ದಿ ಸ್ಮಾರ್ಟ್ ಮಾನ್ಸ್ಟರ್, ದಿ ಸೀರಿಯಸ್ ಚಾಲೆಂಜಸ್ ಫಾರ್ ಯೂತ್" ಎಂಬ ವಿಷಯದ ಕುರಿತು ತಜ್ಞರ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಹೆಚ್ಚಿನ ಫೋನ್ ಬಳಕೆಯು ಮೆದುಳಿಗೆ ಹಾನಿ ಮಾಡುತ್ತದೆ. ನಿದ್ದೆ ಹಸಿವು, ಕಣ್ಣಿ ಆರೋಗ್ಯದ ಮೇಲೂ ಪರಿಣಾಮ ಉಂಟಾಗಿ ಒಟ್ಟಾರೆ ಅನೇಕ ಯುವ ಮೊಗ್ಗುಗಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಮೊಬೈಲ್ ಫೋನ್ ಬಳಕೆಯಲ್ಲಿನ ಗಂಭೀರ ಸಮಸ್ಯೆಗಳನ್ನು ವಿವರಿಸಿದರು.
ಎಸ್.ಜಿ.ಬಿ.ಐ.ಟಿ.ಯ ಡಾ. ಎಫ್.ವಿ. ಮಾನ್ವಿ, ಪ್ರಾಂಶುಪಾಲ ಡಾ. ಬಿ. ಆರ್. ಪಟಗುಂದಿ, ವಿದ್ಯಾರ್ಥಿ ಕಲ್ಯಾಣ ಡೀನ್ ಡಾ. ಆರ್. ಎಂ. ಗಲಗಲಿ, ಫ್ಯಾಕಲ್ಟಿ ಸಂಯೋಜಕರು ಪ್ರೊ. ಮಲ್ಲಿಕಾರ್ಜುನ್ ಭಗವತಿ ಮತ್ತು ಹೇಮಲತಾ ಎಚ್ ಮತ್ತು ವಿದ್ಯಾರ್ಥಿ ಸಂಯೋಜಕ ಆನಂದ್ ಶಿವಯೋಗಿಮಠ ಉಪಸ್ಥಿತರಿದ್ದರು.
ವಿನಯಾ ಬಿ. ಗಲಗಲಿ ಮತ್ತು ವಿನುತಾ ಬಿ. ಗಲಗಲಿ ನಿರೂಪಿಸಿ, ವಂದಿಸಿದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 