ಯೋಗದಿಂದ ಸ್ಮರಣಶಕ್ತಿ ವೃದ್ಧಿ: ಜುತ್ತಾರೀಚೆನ್
ಲೋಕದರ್ಶನವರದಿ
ಗುಳೇದಗುಡ್ಡ24: ಜಗತ್ತಿಗೆ ಭಾರತ ಪರಿಚಯಿಸಿದ ಅದ್ಭುತ ಕಲೆಗಳಲ್ಲಿ ಯೋಗ ವಿದ್ಯೆಯೂ ಒಂದು. ಯೋಗ ಪರಂಪರೆಗೆ ಭಾರತದಲ್ಲಿ ಪುರಾತನ ಇತಿಹಾಸವಿದೆ. ಯೋಗ ವಿದ್ಯೆ ಅರಿತ ನಮ್ಮ ಋಷಿ ಮುನಿಗಳು ಇಂದ್ರಿಯಗಳನ್ನು ನಿಗ್ರಹಿಸಿ, ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ಬೆಳೆಸಿಕೊಂಡಿದ್ದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಹೀಗಾಗಿ ಯೋಗದಿಂದ ಸ್ಮರಣಶಕ್ತಿ ವೃದ್ಧಿಯಾಗುತ್ತದೆಂದು ಜರ್ಮನ್ ದೇಶದ ಯೋಗ ಶಿಕ್ಷಕಿ ಜುತ್ತಾರೀಚೆನ್ ಬ್ಯಾಕ್ ಹೇಳಿದರು.
ಅವರು ಸ್ಥಳೀಯ ನೆಹರು ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಯೋಗದಿಂದ ಸ್ಮರಣಶಕ್ತಿ ವೃದ್ಧಿ ಎಂಬ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಗ ವಿದ್ಯೆ ಅತ್ಯಂತ ಅಗತ್ಯವಾಗಿದೆ.
ಅದು ನಿಮ್ಮ ಆತ್ಮಬಲ ಹೆಚ್ಚಿಸಿ ಏಕಾಗ್ರತೆಗೆ ಸಹಾಯಕವಾಗುತ್ತದೆ. ಮನಸ್ಸು ಹತೋಟಿಗೆ ಬರುತ್ತದೆ. ಮಾನಸಿಕ ಚಂಚಲತೆ ನಿವಾರಣೆಯಾಗುತ್ತದೆ ಎಂದರು.
ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಮಕ್ಕಳು ಪರೀಕ್ಷೆ ಎದುರಿಸುವುದು ಒಂದು ಮಹತ್ವದ ಘಟ್ಟ. ಯೋಗದಿಂದ ಸ್ಮರಣ ಶಕ್ತಿ ಹೇಗೆ ವೃದ್ಧಿಗೊಳ್ಳುತ್ತದೆಂದು ಇಲ್ಲಿನ ಶ್ರೀಕೃಷ್ಣ ಯೋಗಾಶ್ರಮದ ಯೋಗಗುರು ಡಾ.ದೀಪಕ್ ಹಡಗಲಿ ಹೇಳಿದರು. ಡಾ.ಲಕ್ಷ್ಮೀ ಹಡಗಲಿ, ಶಾಲೆಯ ಅಧ್ಯಕ್ಷ, ಪತ್ರಕರ್ತ ಮಹಾಂತೇಶ ಗಣಾಚಾರಿ, ಪ್ರಾಂಶುಪಾಲ ಇ.ಸಾಯಿಕೃಷ್ಣ ವೇದಿಕೆ ಮೇಲಿದ್ದರು.
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ 