ಆರ್ಥಿಕ ಹಿಂಜರಿತ ತಡೆಗೆ ತುರ್ತು ಕ್ರಮ: ಭಾರತಕ್ಕೆ ಐಎಂಎಫ್ ಸಲಹೆ
ವಾಷಿಂಗ್ಟನ್,
ಡಿ 25,ಆರ್ಥಿಕ ಹಿಂಜರಿತ ತಡೆಗೆ ಭಾರತ ಶೀಘ್ರ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಸಲಹೆ ಮಾಡಿದೆ.
ಈ ವರ್ಷ ಆರ್ಬಿಐ ತನ್ನ ಬಡ್ಡಿದರವನ್ನು 5 ಬಾರಿ ಕಡಿತಗೊಳಿಸಿ, ವಿವಿಧ ವಲಯದ ತೆರಿಗೆ ಕಡಿಮೆ ಮಾಡಿ, ಅನೇಕ ಆರ್ಥಿಕ
ಉತ್ತೇಜನ ಕ್ರಮ ಜರುಗಿಸಿದ್ದರೂ ಯಾವುದೇ ನಿರೀಕ್ಷಿತ ಫಲಕೊಟ್ಟಿಲ್ಲ. ಹೂಡಿಕೆ ಜೊತೆಗೆ
ತೆರಿಗೆ ಆದಾಯ ಕಡಿಮೆಯಾಗಿರುವುದು ಅಭಿವೃದ್ಧಿ
ಹೊಂದುತ್ತಿರುವ ಅರ್ಥವ್ಯವಸ್ಥೆಗಳಲ್ಲಿ ಒಂದಾದ ಭಾರತದ
ಪ್ರಗತಿಯ ವೇಗಕ್ಕೆ ಅಡ್ಡಿಯಾಗಿದೆ ಎಂದು ಐಎಂಎಫ್ನ ವಾರ್ಷಿಕ ವರದಿ ತಿಳಿಸಿದೆ. ಲಕ್ಷಾಂತರ ಜನರನ್ನು ಬಡತದಿಂದ ಮೇಲೆತ್ತಿದ ಬಳಿಕವೂ
ಭಾರತವು ಈಗ ಗಮನಾರ್ಹ ಆರ್ಥಿಕ ಕುಸಿತದ ಬಿಕ್ಕಟ್ಟಿಗೆ ಸಿಲುಕಿದೆ ಎಂದು ಐಎಂಎಫ್ ಏಷಿಯಾ ಮತ್ತು ಪೆಸಿಫಿಕ್ ವಿಭಾಗದ ಅಧಿಕಾರಿ ರಣಿಲ್ ಸಲ್ಗಾಡೊ ತಿಳಿಸಿದ್ದಾರೆ. ಆರ್ಥಿಕ ಹಿಂಜರಿತದ ಬಗ್ಗೆ ಗಮನ ಹರಿಸಿ
ಭಾರತವನ್ನು ತುರ್ತಾಗಿ ಉನ್ನತ ಅಭಿವೃದ್ಧಿಯ ಪಥದಲ್ಲಿ ಸಾಗಿಸಬೇಕಿದ್ದರೆ ತುರ್ತಾಗಿ ಕಾರ್ಯನೀತಿಯನ್ನೂ ರೂಪಿಸಬೇಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಆರ್ಥಿಕ
ಕ್ಷೇತ್ರವನ್ನು ಬಲಪಡಿಸುವ ಮೂಲಕ ಸುಧಾರಣಾ ಕ್ರಮವನ್ನು ಸರಕಾರ ಪುನರುಜ್ಜೀವನಗೊಳಿಸುವ ಅಗತ್ಯವಿದೆ
ಎಂದು ಸಲ್ಗಾಡೊ ಹೇಳಿದ್ದಾರೆ. ಆರ್ಥಿಕ ಹಿಂಜರಿತ ಹೀಗೆಯೇ ಮುಂದುವರಿದರೆ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿದರವನ್ನು ಇನ್ನಷ್ಟು ಕಡಿತಗೊಳಿಸುವ
ಸಾಧ್ಯತೆಯೂ ಇದೆ ಎಂದು ಸಲ್ಗಾಡೊ ಹೇಳಿದ್ದಾರೆ.ಹಣಕಾಸು
ಕೊರತೆ ತಗ್ಗಿಸುವ ಜೊತೆಗೆ ಹೊಸ ಸಂಪನ್ಮೂಲ, ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ಕಳೆದ ವಾರ ಐಎಂಎಫ್
ಮುಖ್ಯ ಅರ್ಥಶಾಸ್ತ್ರಜ್ಞೆ, ಭಾರತೀಯರೇ ಆಗಿರುವ ಕೇರಳ ಮೂಲದ
ಗೀತಾ ಗೋಪಿನಾಥ್ ಅಭಿಪ್ರಾಯಪಟ್ಟಿದ್ದರು.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 