ಮಾದಕ ವ್ಯಸನ ಬದುಕಿಗೆ ಮಾರಕ, ನಿರ್ವ್ಯಸನ ಆರೋಗ್ಯಕ್ಕೆ ಪೂರಕ
Drug addiction is fatal to life, abstinence is beneficial to health
ಲೋಕದರ್ಶನ ವರದಿ
ಮಹಾಲಿಂಗಪುರ 23: ಮಾದಕ ವ್ಯಸನ ಬದುಕಿಗೆ ಮಾರಕ, ನಿರ್ವ್ಯಸನ ಆರೋಗ್ಯಕ್ಕೆ ಪೂರಕ ಎಂದು ಠಾಣಾಧಿಕಾರಿ ಕಿರಣ ಸತ್ತಿಗೇರಿ ಹೇಳಿದರು. ಸ್ಥಳೀಯ ಕೆಎಲ್ಇ ಪದವಿ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜು ಕ್ಯಾಂಪಸ್ನಲ್ಲಿ ದುರ್ವ್ಯಸನದ ಬಗ್ಗೆ ಯಾವುದೇ ಚಟುವಟಿಕೆ ಕಂಡುಬಂದರೂ ಪೊಲೀಸ್ ಇಲಾಖೆಗೆ ಸಂದೇಶ ನೀಡುವ ಮಾಹಿತಿದಾರ ನಿಮ್ಮೊಳಗೇ ಒಬ್ಬನಿರುತ್ತಾನೆ. ಆದ್ದರಿಂದ ಮಕ್ಕಳು ಹುಷಾರಾಗಿ ದಾರಿ ತಪ್ಪದ ನಡವಳಿಕೆಯಿಂದ ಇರಬೇಕು ಎಂದರು. ಕ್ಯಾಂಪಸ್ ನಲ್ಲಾಗಲೀ ಸಾರ್ವಜನಿಕ ಸ್ಥಳದಲ್ಲಾಗಲೀ ಮಾದಕವಸ್ತು ಬಗ್ಗೆ ಯಾವುದೇ ಮಾಹಿತಿಯನ್ನು ಠಾಣೆಗೆ ನೀಡಿದರೆ ಅವರ ಹೆಸರನ್ನು ಗೌಪ್ಯವಾಗಿಟ್ಟು, ಕ್ರಮ ಜರುಗಿಸುತ್ತೇವೆ ಎಂದರು.
ಮಾದಕ ವ್ಯಸನದ ಬಗ್ಗೆಮಾಹಿ ನೀಡುವ ಕ್ಯೂಆರ್ ಕೋಡ್ ಇರುವ ಚಾರ್ಟನ್ನು ಠಾಣಾಧಿಕಾರಿ ಪ್ರಾಚಾರ್ಯರಿಗೆ ಒಪ್ಪಿಸಿದರು. ಪ್ರಾಚಾರ್ಯ ಎನ್.ಬಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಶಿಷ್ಟಾಚಾರ, ಸಾತ್ವಿಕ ಆಹಾರ, ಒಳ್ಳೆಯ ವಿಚಾರ ರೂಢಿಸಿಕೊಳ್ಳಬೇಕು. ಯಾವುದೇ ಮಾದಕ ವಸ್ತುಗಳ ವ್ಯಸನಿಕರಾಗಬಾರದು ಎಂದರು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ, ಪಿಯು ಪ್ರಾಚಾರ್ಯ ಎಲ್.ಬಿ.ತುಪ್ಪದ, ಪ್ರಶಾಂತ ಗೌಳಿ, ಐ.ಸಿ.ಶಿರೋಳ, ಎಸ್.ಎಸ್.ಮುಗಳ್ಯಾಳ ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 