ಶಾಲೆಯ ಕಂಪೌಂಡ ಕಾಮಗಾರಿಗೆ ಚಾಲನೆ
ಲೋಕದರ್ಶನ ವರದಿ
ಮುಗಳಖೋಡ: ಪಟ್ಟಣದ ವಾರ್ಡ ನಂ 16ರಲ್ಲಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ದಾಸರತೋಟದ ಶಾಲೆಯ ಕಂಪೌಂಡ ಕಾಮಗಾರಿಗಾಗಿ ಪುರಸಭೆ 2018-19ರ ಸಾಲಿನ ಎಸ್.ಇ.ಪಿ-ಟಿ,ಎಸ್,ಪಿ ಯೋಜನೆಯ ಅಡಿಯಲ್ಲಿ 28.91 ಲಕ್ಷ ರೂ.ಗಳ ಕಾಮಗಾರಿಗೆ ಪುರಸಭೆಯ ಅಧ್ಯಕ್ಷ ಮಾಂತೇಶ ಗೋಳಸಂಗಿ ಇವರು ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಮಹಾವೀರ ಬೋರಣ್ಣವರ ಹೊಸದಾಗಿ ಆದ 2018-2019 ರ ಸಾಲಿನ ಪುರಸಭೆಗೆ ಅತೀ ಹೆಚ್ಚು ಅನುದಾನ 14 ನೇ ಹಣಕಾಸು ಎಸ್.ಎಫ್.ಸಿ ಯೋಜನೆಯ ವಿವಿಧ ಕಾಮಗಾರಿಗಳಿಗಾಗಿ ಒಟ್ಟು 577.91 ಲಕ್ಷ ರೂ.ಗಳು ಮಂಜುರಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಪಿ.ರಾಜು ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷ ಸತ್ಪಾಲ ಗೋಳಸಂಗಿ, ಪುರಸಭೆ ಸದಸ್ಯ ಗೌಡಪ್ಪ ಖೇತಗೌಡರ, ಭೂ-ದಾನಿ ಪಾರಿಸ್ ಹಿಪ್ಪರಗಿ (ಅಂಭೋಜಿ) ರಾಮು ಹುಲ್ಲೋಳಿ, ಗಂಗಪ್ಪ ಗೋಳಸಂಗಿ, ಸಂಜು ಬಾಬಣ್ಣವರ, ಅನ್ನಪೂಣರ್ಾ ಎರಡತ್ತಿ, ಮಲ್ಲಯ್ಯ ಮಠಪತಿ, ತಮ್ಮಣ್ಣ ಗೋಳಸಂಗಿ, ಶ್ರೀಮಂತ ಶಿರಹಟ್ಟಿ, ಮಾಂತೇಶ ಎರಡತ್ತಿ, ಶಿವಚಂದ್ರ ತುಳಸಿಗೇರಿ, ಗುಳಪ್ಪ ಉಗಾರ, ಬಿ.ವಾಯ್.ಜಾಗನೂರ, ಶಿವು ಗೋಲಭಾಂವಿ, ಪುರಸಭೆಯ ಸಹಾಯಕ ಅಭಿಯಂತರರು ಎಸ್.ಆರ್. ಚೌಗಲಾ, ಕೆಂಚಪ್ಪ ಹಳಿಂಗಳಿ, ಗುತ್ತಿಗೆದಾರ ಕುಮಾರ ಶೇಡಶಾಳ ಮುಂತಾದವರು ಉಪಸ್ಥಿತರಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 