ಸೀಲ್ಡೌನ್ ಪ್ರದೇಶದಲ್ಲಿ ಓಡಾಟಕ್ಕೆ ಅವಕಾಶ ನೀಡಬೇಡಿ,ಅಗತ್ಯ ವಸ್ತುಗಳ ಹೋಂ ಡೆಲವರಿ ನೀಡಿ: ಜಿಲ್ಲಾಧಿಕಾರಿ

ಹಾವೇರಿ: ಮೇ 07    ಕೋವಿಡ್ ಪಾಸಿಟಿವ್  ಪ್ರಕರಣದ ಹಿನ್ನೆಲೆಯಲ್ಲಿ ಸೀಲ್ಡೌನ್ ಆಗಿರುವ ಸವಣೂರ ಪಟ್ಟಣ ರಾಜೀವಗಾಂಧಿ ನಗರ ಹಾಗೂ ಎಸ್.ಎಂ.ಕೃಷ್ಣ ಬಡಾವಣೆಯಲ್ಲಿ ಸಾರ್ವಜನಿಕ ಓಡಾಟಕ್ಕೆ ಅವಕಾಶ ನೀಡಬೇಡಿ. ಅಗತ್ಯ ವಸ್ತುಗಳನ್ನು ಹೋಂ ಡೆಲವರಿ ನೀಡಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸೂಚನೆ ನೀಡಿದರು.

ಸವಣೂರು ಸೀಲ್ಡೌನ್ ಪ್ರದೇಶದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಗುರುವಾರ ಸಂಜೆ ಉಪವಿಭಾಗಾಧಿಕಾರಿ ಹಾಗೂ ತಾಲೂಕಾ ತಹಶೀಲ್ದಾರರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಅವರು ಮಾಹಿತಿ ಪಡೆದರು. 

ಇಂದಿನಿಂದ ಹಾಲು  ಪೂರೈಸಲು ಸೀಲ್ಡೌನ್ ಆಗಿರುವ ಪ್ರದೇಶದಲ್ಲಿ ಉಚಿತ ಹಾಲು ವಿತರಣೆಗೆ ಆದೇಶ ಮಾಡಲಾಗಿದೆ. ಈಗಾಗಲೇ ಉಚಿತವಾಗಿ ಆಹಾರ ಕಿಟ್ಗಳನ್ನು ಸಹ ವಿತರಿಸಲಾಗಿದೆ. ದಾನಿಗಳಿಂದ ನೆರವು ಪಡೆದು ತರಕಾರಿ ವಿತರಣೆಗೆ ಸಾಧ್ಯವಾದರೆ ಕ್ರಮವಹಿಸಿ ಎಂದು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಪ್ರದೇಶದಲ್ಲಿ ಕಡ್ಡಾಯವಾಗಿ ಮನೆಯ ಶೌಚಾಲಯಗಳನ್ನೇ ಬಳಸುವಂತೆ ತಿಳುವಳಿಕೆ ನೀಡಬೇಕು. ಬಯಲು ಬಹಿದರ್ೆಸೆಗೆ ನಿರ್ಭಂಧ ಹಾಕಬೇಕು. ಶೌಚಾಲಯ ವ್ಯವಸ್ಥೆ ಇಲ್ಲದವರಿಗೆ ಪುರಸಭೆಯಿಂದ ತಾತ್ಕಾಲಿಕ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ ಮಾಹಿತಿ ನೀಡಿ, ಮನೆ ಮನೆ ಆರೋಗ್ಯ ತಪಾಸಣೆ ನಡೆಸಲಾಗಿದೆ.  ಜನರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.   ಸಾರ್ವಜನಿಕರಿಗೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಸೀಲ್ಡೌನ್ ಪ್ರದೇಶದಲ್ಲಿ  ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ತಾಲೂಕಾ ಆಸ್ಪತ್ರೆಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲು ಸೂಚಿಸಲಾಗಿದೆ . ಪಟ್ಟಣದಲ್ಲಿ ಸ್ವಚ್ಛತೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು,  ಖಾದರಭಾಗ್, ಸುಣಗಾರ ಓಣಿ,  ಕಮಲಬಂಗಡಿ ಓಣಿಗಳಲ್ಲಿ ಮೆಲಾಥಿನ್ ಸಿಂಪಡಣೆ ಮಾಡಲಾಗಿದೆ.  ಅಗ್ನಿಶಾಮಕ ವಾಹನದಿಂದ ಕಂಟೈನ್ಮೆಂಟ್ ಜೋನ್ ಪ್ರದೇಶದಲ್ಲಿ ಹೈಪೋ ಕ್ಲೋರೈಡ್ ದ್ರಾವಣ ಸಿಂಪಡಿಸಲಾಗಿದೆ. ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ ಹಾಗೂ 394 ಆಹಾರ್ ಕಿಟ್ ವಿತರಿಸಲಾಗಿದೆ ಎಂದು ತಿಳಿಸಿದರು.

ಪಟ್ಟಣದ ಎಸ್.ಎಂ.ಕೃಷ್ಣ ನಗರದ ಕೋವಿಡ್ ಸೋಂಕಿತ ಮನೆಯಿಂದ 100 ಮೀಟರ್ ಸುತ್ತಲೂ ಕಂಟೈನಮೆಂಟ್ ಜೋನ್ ಎಂದು ಪರಿಗಣಿಸಿ ಅದರ ಸುತ್ತಲೂ ಚೆಕ್ ಪೋಸ್ಟ್ಗಳನ್ನು ನಿಮರ್ಿಸಿ ಸಾರ್ವಜನಿಕರ ಸಂಚಾರ ಸ್ಥಗಿತಗೊಳಿಸಲಾಗಿದೆ. ಪಾಸ್ ಹೊಂದಿದ ವಾಹನಗಳು, ಗೂಡ್ಸ್ ವಾಹನಗಳಿಗೆ ಮಾತ್ರ ಸವಣೂರ ಪಟ್ಟಣದ ಮೂಲಕ ರಾಜ್ಯ ಹೆದ್ದಾರಿ ಮುಖಾಂತರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ..  ಡಿ.ಎಸ್.ಪಿ. ಅವರ ಉಸ್ತುವಾರಿಯಲ್ಲಿ ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ. ಆಶಾ ಕಾರ್ಯಕತರ್ೆಯರೊಂದಿಗೆ ಸವಣೂರ ಪಟ್ಟಣದ  ಎಸ್.ಎಂ.ಕೃಷ್ಣ ನಗರದಲ್ಲಿನ 374 ಮನೆಗಳಿಗೆ ಭೇಟಿ ನೀಡಿ ಪ್ರತಿ ಸದಸ್ಯರ ಆರೋಗ್ಯ ತಪಾಸಣೆ ನಡೆಸಲಾಗಿದೆ ಹಾಗೂ ದೇಹದ ಉಷ್ಣಾಂಶವನ್ನು ಥರ್ಮಲ್ ಸ್ಕ್ಯಾನರ್ದಿಂದ ಪರೀಕ್ಷೆ ಮಾಡಲಾಗಿದೆ.  ಈ ಪೈಕಿ ಏಳು ಜನರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದೆ. ಹೊರ ರಾಜ್ಯ, ಹೊರ ಜಿಲ್ಲೆಯಿಂದ ಆಗಮಿಸಿದವರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಆಶಾ ಕಾರ್ಯಕತರ್ೆಯರ ಸಹಾಯದೊಂದಿಗೆ 10 ತಂಡಗಳನ್ನು ರಚಿಸಿ ದಿನಕ್ಕೆ 1068 ಮನೆಗಳನ್ನು ಸಮೀಕ್ಷೆ ಕೈಗೊಳ್ಳಲಾಗಿದೆ.  ಎಂಟು ಜನ ಜ್ವರದಿಂದ ಹಾಗೂ ಆರು ಜನ ಕೆಮ್ಮು ಮತ್ತು  ನೆಗಡಿಯಿಂದ ಬಳಲುತ್ತಿರುವವರನ್ನು ಜ್ವರ ತಪಾಸಣಾ ಘಟಕಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

ವಿಡಿಯೋ ಸಂವಾದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ,  ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಸಮಾಜ ಕಲ್ಯಾಣ ಇಲಾಖೆ ಉಪನಿದರ್ೆಶಕಿ ಶ್ರೀಮತಿ ಚೈತ್ರಾ,  ಹಾವೇರಿ ತಹಶೀಲ್ದಾರ ಶಂಕರ, ಸವಣೂರ ತಹಶೀಲ್ದಾರ ಮಲ್ಲಿಕಾಜರ್ು ಇತರರು ಉಪಸ್ಥಿತರಿದ್ದರು.