ನಿವೃತ್ತ ನೌಕರರ ಸಂಘದ ಜಿಲ್ಲಾ ಸಮಾವೇಶ ಯಶಸ್ವಿಗೆ ಕರೆ

ದೇವರಹಿಪ್ಪರಗಿ 19: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಸಮಾವೇಶ ಯಶಸ್ವಿಗೆ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚನ್ನವೀರ​‍್ಪ ಕುದರಿ ಕರೆ ನೀಡಿದ್ದಾರೆ. 

ಪಟ್ಟಣದಲ್ಲಿ ಶನಿವಾರದಂದು ಪತ್ರಿಕೆ ಜೊತೆ ಮಾತನಾಡಿದ ಅವರು ವಿಜಯಪುರ ನಗರದ ರಾಜ್ಯ ಸರ್ಕಾರಿ ನೌಕರರ ಸರ್ಕಾರಿ ಭವನದಲ್ಲಿ ಅ. 20 ರಂದು ಬೆಳಗ್ಗೆ 10.30 ಕ್ಕೆ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಸಮಾವೇಶ ನಡೆಯಲಿದೆ ತಾಲೂಕು, ಜಿಲ್ಲೆಯ ಹಾಗೂ ರಾಜ್ಯದ ಎಲ್ಲಾ ನಿವೃತ್ತ ನೌಕರರು ಭಾಗವಹಿಸುವ ಮೂಲಕ ರಾಜ್ಯ ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. 

ಕಾರ್ಯಕ್ರಮದ ಸಾನಿಧ್ಯವನ್ನು ಬುರಣಾಪೂರ ಸಿದ್ಧಾರೂಢದ ಮಠದ ಯೋಗೇಶ್ವರಿ ಮಾತಾಜಿ ಮತ್ತು ಗೊರನಾಳ ಓಂಕಾರೇಶ್ವರ ಆಶ್ರಮದ ಹಿರೇಮಠ ಡಾ. ವಿರುಪಾಕ್ಷ ದೇವರು ಸಾನ್ನಿಧ್ಯ ವಹಿಸುವರು. ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಎಲ್‌. ಭೈರ​‍್ಪ ಸಮಾವೇಶ ಉದ್ಘಾಟಿಸುವರು.ನಿವೃತ್ತ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್‌.ಪಿ. ಬಿರಾದಾರ (ಕಡ್ಲೆವಾಡ) ಅಧ್ಯಕ್ಷತೆ ವಹಿಸುವರು. ಸಂಘದ ಉಪಾಧ್ಯಕ್ಷ ಜಿ.ಸಿ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ರಂಗೇಗೌಡ, ಖಜಾಂಚಿ ಎಸ್‌.ಎಂ. ಆನಂದಪ್ಪ, ಉಪಾಧ್ಯಕ್ಷೆ ಎಸ್‌. ಶಾರದಮ್ಮ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಸೇಡಶ್ಯಾಳ, ಎ.ವೈ. ಬೆಂಡಿಗೇರಿ, ಮಲ್ಲಪ್ಪ ಮುದಕವಿ, ವಿ.ಬಿ. ಗೊವಿಂದಪ್ಪ, ಎಸ್‌.ಎನ್‌. ಬಿರಾದಾರ ಭಾಗವಹಿಸುವರು ಎಂದು ತಿಳಿಸಿದ್ದಾರೆ.ತಾಲೂಕಿನ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.