ಸರ್ಕಾರದಿಂದ ಬಂದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ವಿತರಣೆ
Distribution to beneficiaries of various schemes from the government
ಮಹಾಲಿಂಗಪುರ 30: ಸರ್ಕಾರದಿಂದ ಬಂದಿ ವಿವಿದ ಯೋಜನೆಗಳ ಫಲಾನುಭವಿಗಳಿಗೆ ಅವರಿಗೆ ಬಂದ ಸಾಮಗ್ರಿಗಳನ್ನು ಆದಷ್ಟುಬೇಗನೆ ಹಂಚಿಕೆ ಮಾಡಿ ಇಟ್ಟುಕೊಂಡು ಕೂಡಬೇಡಿ ಎಂದು ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಪುರಸಭೆಯಲ್ಲಿ 2023-24.24-25 ನೇ ಸಾಲೀನ ಸ್ಥಳೀಯ ನಿಧಿ ಶೇ 24.10 ಯೋಜನೆಯಡಿ ಬಂದ ಯಂತ್ರಗಳನ್ನು ಮತ್ತು 24-25 ನೇ ಸಾಲೀನ ಸ್ಥಳೀಯ ನಿಧಿ 24.10 ನಲ್ಲಿ ಸೋಲಾರ ಲೈಟ್ಗಳನ್ನು ಆಯ್ದ ಹಿಂದೂಳಿದ ಮತ್ತು ಎಸ್,ಸಿ.ಎಸ್.ಟಿ ಫಲಾನುಭವಿಗಳಿಗೆ ಆದಷ್ಟು ಬೇಗನೇ ನೀಡಿ ಸಹಕರಿಸಿದ, ಮತ್ತು ಎಲ್ಲ ಕುಟುಂಬಗಳಿಗೆ ಸರ್ಕಾರ ಯೋಜನೆಗಳು ಸಿಗುವಂತೆ ಮಾಡಿ ಕೊಟ್ಟವರಿಗೆ ಮತ್ತೆ ಮತ್ತೆ ಕೊಡುವ ಬದಲು ಬೇರೆ ಬೇರೆ ಬಡವರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕು,ಮತ್ತು ನಗರೋತ್ತಾನ ಯೋಜನೆಯಲ್ಲಿ ಸುಮಾರು 2-3 ಕೋಟಿ ರೂಗಳ ಪೌರಕಾರ್ಮಿಕರಿಗೆ,ಎಸ್.ಸಿ.ಎಸ್.ಟಿಗಳಿಗೆ ಸೌಲತ್ತುಗಳ ಬರುತ್ತಿವೆ. ಎಸ್.ಎಫ್.ಸಿ ಯೋಜನೆಯಲ್ಲಿ 10 ರೂ ಮಂಜೂರಿಯಾಗಿದೆ ಆದರೆ ಕೆಲಸ ಮಾತ್ರ ನಿಧಾನಗತಿಯಲ್ಲಿ ನಡೆದಿದೆ.ಯಾರು ಕೆಲಸ ಮಾಡಿಲ್ಲ ಅವುಗಳನ್ನು ರಂದು ಮಾಡಿ ರೀ ಟೆಂಡರ ಕರೆಯಿರಿ ಎಂದು ಮುಖ್ಯಾಧಿಕಾರಿಗಳಿಗೆ ತಿಳಿಸಲಾಗಿದೆ,
ಈ ಹಿಂದೆ 5 ನೂರು ಮನೆಗಳನ್ನು ಸಹ ತರಲಾಗಿದೆ, ಅವುಗಳ ವಿತರಣೆ ಕೂಡಾ ತಡವಾಗಿದೆ, ಕಾರಣ ಎಲ್ಲ ಮನೆಗಳನ್ನು ಮನೆ ಇಲ್ಲದಿರುವವರಿಗೆ ಹಂಚಿಕೆ ಮಾಡಿ, ಬಂದ ಸೌಲಭ್ಯಗಳನ್ನು ಬೇಗ ಬೇಗ ನೀಡಿದರೆ ನೆಮ್ಮಯಿಂದ ಜೀವನ ಸಾಗಿಸುತ್ತಾರೆ ಎಂದರು.
ಒಟ್ಟು 6 ಲಕ್ಷ 11 ಸವೀರ ವೆಚ್ಚದಲ್ಲಿ 72 ಹೋಲಿಗೆ ಯಂತ್ರ , ಮತ್ತು 4 ಲಕ್ಷ 92 ಸಾವೀರ ರೂಗಳಲ್ಲಿ 47 ಸೋಲಾರ ಲೈಟ್ಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.
ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಪುರಸಭೆ ಉಪಾಧ್ಯಕ್ಷೆ ಶೀಲಾ ಬಾವಿಕಟ್ಟಿ, ಸ್ಥಾಯಿ ಸಮೀತಿ ಚೇರಮನ್ ಅಬ್ದುಲ್ ಬಾಗವಾನ ಮುಖ್ಯಾಧಿಕಾರಿ ನಾಮದೇವ ಲಮಾಣಿ ವೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ಪುರಸಭೇ ಸದಸ್ಯರಾದ ಶೇಖರ ಅಂಗಡಿ, ಮುಸ್ಥಾಕ ಚಿಕ್ಕೋಡಿ, ಚನಬಸು ಯರಗಟ್ಟಿ, ಪಾಪಾ ನಾಲಬಂದ, ಡಾ ಸವಿತಾ ಕೋಳಿಗುಡ್ಡ, ಆನಂದ ಬಂಡಿ, ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಈರ್ಪ ದಿನ್ನಿಮನಿ, ಜಿ.ಎಸ್ ಗೊಂಬಿ, ಮಹಾಲಿಂಗಪ್ಪ ಕುಳ್ಳೋಳ್ಳಿ, ಚನ್ನಪ್ಪ ಪಟ್ಟಣಶೆಟ್ಟಿ, ಶಿವಾನಂದ ಅಂಗಡಿ, ಲಕ್ಷ್ಮಣ ಮಾಂಗ, ಗುರುಪಾದ ಅಂಬಿ, ಅರ್ಜುನ ಮೋಪಗಾರ, ದಾದಾ ಸನದಿ, ಬಸವರಾಜ ಹುಕ್ಕೆರಿ, ಬಸವರಾಜ ಮಡಿವಾಳ, ಭೀಮಶಿ ಗೌಂಡಿ, ವಿಜಯ ಸಬಕಾಳೆ, ಶಿವಬಸು ಗೌಂಡಿ, ಮಲ್ಲಪ್ಪ ದಲಾಲ, ಮಾನಿಂಗ ಕಂಠಿ, ಜಗಧೀಶ ಜಕ್ಕನ್ನವರ, ವಿರೇಶ ಮುಂಡಗನೂರ, ಪುರಸಭೆ ಅಧಿಕಾರಿಗಳಾದ ಪಿ.ವಾಯ್ ಸೊನ್ನದ, ಸಿ.ಎಸ್. ಮಠಪತಿ, ಎಸ್.ಎನ್ ಪಾಟೀಲ, ರಾಮು ಮಾಂಗ, ಲಕ್ಷ್ಮೀ ಪರೀಟ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 