ಗುಬ್ಬೇವಾಡ ಶಾಲೆಯಲ್ಲಿ ಭಕ್ತ ಕನಕದಾಸರ ಜಯಂತಿ ಆಚರಣೆ
Devotee Kanakadasa Jayanti celebrated at Gubbewada school
ಇಂಡಿ 08: ತಾಲೂಕಿನ ಗುಬ್ಬೇವಾಡದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಶಿಕ್ಷಕ ಶಾಬುದ್ದೀನ್ ಕಸಾಯಿ ಭಾಗವಹಿಸಿ ಮಾತನಾಡಿ, ಕನಕದಾಸರ ಜೀವನವೇ ಒಂದು ಪವಾಡ, ತಿಮ್ಮಪ್ಪನಾಯಕನಾಗಿ ಜನಿಸಿ ಕನಕನಾಯಕನಾಗಿ ಕನಕದಾಸರಾಗಿ ಬೆಳೆದದ್ದು ವಿಶೇಷ, ಸಮಾಜದ ಕೆಳವರ್ಗದಲ್ಲಿ ಜನಿಸಿ ಕೃಷ್ಣನ ವಿಶೇಷ ಭಕ್ತನಾಗಿ ಹೊರಹೊಮ್ಮಿದ್ದು ಅವರ ಭಕ್ತಿಯ ಪರಾಕಾಷ್ಠೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.
ಶಿಕ್ಷಕ ಬಿ.ವಿ.ಹಿರೇಮಠ ಮಾತನಾಡಿ ಕನಕಾದಾರು ಕನ್ನಡ ಸಾಹಿತ್ಯದ ಉನ್ನತ ಸ್ಥಾನದಲ್ಲಿ ನಿಲ್ಲುವರು, ಅವರ ಮೋಹನ ತರಂಗಿಣಿ, ರಾಮಧಾನ್ಯ ಚರಿತೆ ಕೃತಿಗಳು ಹಾಗೂ ಅವರು ಬರೆದ ಕೀರ್ತನೆಗಳು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಎಂದು ಬಣ್ಣಿಸಿದರು. ಸಮಾಜದಲ್ಲಿನ ಮೇಲು ಕೀಳು, ಬಡವ ಬಲ್ಲಿದ ಎನ್ನುವ ತಾರತಮ್ಯವನ್ನು ನಿಷ್ಠುರವಾಗಿ ಖಂಡಿಸಿದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಭಾಷಣ, ನೃತ್ಯಗಳನ್ನು ಮಾಡಿ ಗಮನ ಸೆಳೆದರು.
ಮುಖ್ಯ ಗುರುಗಳಾದ ಎಮ್.ಬಿ.ಹಾವಳಗಿ, ಶಿಕ್ಷಕರಾದ ಎನ್.ಎಮ್.ಕ್ಷತ್ರಿ, ಎಸ್.ಆರ್.ಅರವತ್ತು, ಎಮ್.ಎಸ್.ಮಾಳಿ, ವಿ.ಬಿ.ಹೊನವಾಡ, ಸುನೀಲ ಮರಗೂರ, ವಿದ್ಯಾ ಮರಗೂರ, ಎಮ್.ಆರ್ ವಾಲಿಕಾರ ಭಾಗವಹಿಸಿದ್ದರು. ಎನ್.ಜೆ.ಚಿಂಚೋಳಿ ನಿರೂಪಿಸಿದರು, ಎಸ್.ಎ.ರಾಠೋಡ ವಂದಿಸಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 