ಮೋಳೆ ಗ್ರಾಮದ ಮಲ್ಲಿಕಾರ್ಜುನ ಮಂದಿರದಲ್ಲಿ ದೀಪೋತ್ಸವ
ಮೋಳೆ ಗ್ರಾಮದ ಮಲ್ಲಿಕಾರ್ಜುನ ಮಂದಿರದಲ್ಲಿ ದೀಪೋತ್ಸವದ ಕಾರ್ಯಕ್ರಮದಲ್ಲಿ ದೀಪ ಬೆಳಗುತ್ತಿರುವ ಭಕ್ತರ ಚಿತ್ರ.
ಕಾಗವಾಡ 26: ತಾಲೂಕಿನ ಮೋಳೆ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಮಂದಿರದಲ್ಲಿ ಸೋಮವಾರ ದಿ. 25 ರಂದು ಕಾರ್ತಿಕ ಮಾಸದ ಸೋಮವಾರ ದಿನ ದೀಪೋತ್ಸವ ಕಾರ್ಯಕ್ರಮ ಅತೀ ಸಂಭ್ರಮದಿಂದ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಗ್ರಾಮದ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಮಂದಿರದಲ್ಲಿ ಕಾರ್ತಿಕ ಮಾಸದ ಸೋಮವಾರ ದಿನದಂದು ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮೋಳೆ ಗ್ರಾಮದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಮತ್ತು ಗ್ರಾಮಸ್ಥರು ಮಂದಿರಕ್ಕೆ ಆಗಮಿಸಿ, ದೀಪ ಬೆಳಗಿ, ಭಕ್ತಿ ತೋರಿದರು. ಭಕ್ತರ ದೀಪಗಳಿಂದ ಮಂದಿರವು ಕಂಗೋಳಿಸಿತು.
ಈ ಸಮಯದಲ್ಲಿ ಮಂದಿರ ಅರ್ಚಕ ಸಂಗಯ್ಯ ಮಠದ ಮಾತನಾಡಿ, ಅಂಧಕಾರದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕು ಬೆಳಗುವ ಉದ್ದೇಶದಿಂದ ಈ ದೀಪೋತ್ಸವವನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. ಇನ್ನೂ ಮಂದಿರ ಕಮೀಟಿಯ ಉಪಾಧ್ಯಕ್ಷ ರಾಯಪ್ಪ ಹಳಮನಿ ಮಾತನಾಡಿ ಈ ವರ್ಷದ ದೀಪೋತ್ಸವ ವಿಶೇಷವಾಗಿದ್ದು ನೂರಾರು ಭಕ್ತರು ಇದರಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದರು.
ಈ ಸಮಯದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ತೇಲಿ, ದುಂಡಪ್ಪ ಚಾಳೇಕರ, ಶಂಕರ ಹಿರೇಮಠ, ಮಿರಾಸಬ ನದಾಪ, ಸದಾಶಿವ ಐನಾಪೂರ, ಶ್ರೀಶೈಲ ತೇಲಿ, ಲಕ್ಷ್ಮಣ ನಿಮಗೋಜಿ, ಮಹಾದೇವ ಭಾವಿಕಟ್ಟಿ, ಮಲ್ಲಪ್ಪ ಬಡಿಗೇರ, ಗೀರೀಶ ನಿಂಗೋಜಿ, ಚನ್ನಪ್ಪ ಕೋಷ್ಠಿ, ಮೃತುಂಜಯ ಮಠದ, ಶ್ರೀಶೈಲ ಜಂಗಲಗಿ, ರಾಜು ಹಳ್ಳೋಳಿ, ಬಸವರಾಜ ಗುರ್ಕಿ, ಚನ್ನಪ್ಪ ಶಿಫೂರೆ, ಶಿವಾನಂದ ಸಂಭೋಜಿ ಸೇರಿದಂತೆ ಅನೇಕ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 