ದಿಂಡಿ ಉತ್ಸವ ಕಾರ್ಯಕ್ರಮ
ರಾಣೇಬೆನ್ನೂರ20: ವಿಠ್ಠಲ ರುಕುಮಾಯಿ ದಿಂಡಿ ಉತ್ಸವ, ಭಾವಸಾರ ಕ್ಷತ್ರಿಯ ದೈವ ಮಂಡಳಿ ಮತ್ತು ಯುವಕ ಮಂಡಳಿ ಹಾಗೂ ಭಜನಾ ಮಂಡಳಿ ಇವರ ಆಶ್ರಯದಲ್ಲಿ 40ನೇ ವರ್ಷದ ದಿಂಡಿ ಉತ್ಸವ ಕಾರ್ಯಕ್ರಮವು ಜು.22 ರಿಂದ ಜು.24 ರವರೆಗೆ 3 ದಿನಗಳ ಕಾಲ ಕೋಟೆ ರೋಡ್ನಲ್ಲಿರುವ ಯಮನೂರು ಗಲ್ಲಿಯ ವಿಠ್ಠಲ ಮಂದಿರದಲ್ಲಿ ನಡೆಯಲಿದೆ.
ಜು.22 ರಂದು ರಾತ್ರಿ.8.30ಕ್ಕೆ (ಗ್ರಂಥ) ಪೋತಿ ಸ್ಥಾಪನೆ ಮತ್ತು ಭಜನಾ ಕಾರ್ಯಕ್ರಮಗಳು ಜರುಗಲಿವೆ. ಜು.23 ರಂದು ಏಕಾದಶಿ, ಜು.24 ರಂದು ಬೆ.8 ಗಂಟೆಗೆ ವಿಠ್ಠಲ ರುಕುಮಾಯಿ ಮೂತರ್ಿಯ ಪಾಲಕಿ ಉತ್ಸವ ಹಾಗೂ ನಗರ ಪ್ರದಕ್ಷಣೆ ನಂತರ ಮಧ್ಯಾಹ್ನ.2ಗಂಟೆಗೆ ಅನ್ನಸಂತರ್ಪಣೆ ನಡೆಯುವುದು.
ಹೊಳಲಿನ ದೊಂಡಿಬಾ ಟಿಕಾರೆ ಮತ್ತು ಹುಬ್ಬಳ್ಳಿಯ ವೆಂಕಟೇಶರಾವ್ ಸರ್ವದೆ, ದಾವಣಗೇರಿಯ ವಿಶ್ವನಾಥ ಜಿಂಗಾಡೆ, ತಿಪ್ಪೇಶ ಗಣಾಚಾರಿ, ಶ್ರೀಕಾಂತ ಜಿ.ಪಿ, ಸವಣೂರಿನ ನಾಮದೇವ ರಾಶಿಂಕರ ಸಂಗಡಿಗರಿಂದ ಕೀರ್ತನೆ ಮತ್ತು ಪ್ರವಚನ ನಡೆಯುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಭಾವಸಾರ ಕ್ಷತ್ರಿಯ ಸಮಾಜವು ಪ್ರಕಟಣೆಯಲ್ಲಿ ತಿಳಿಸಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 