ಗೋಶಾಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರಿಂದ ನಿರಂತರ ಸ್ವಚ್ಛತೆ
Continuous cleanliness by Hindu organization activists at the cowshed
ಮಹಾಲಿಂಗಪುರ 23: ನಗರದ ಆರಾಧ್ಯ ದೈವ ಮಹಾಲಿಂಗೇಶ್ವರ ದೇವಸ್ಥಾನದ ಗೋಶಾಲೆಯನ್ನು ಬೆನಕನ ಅಮಾವಾಸ್ಯೆ ಮತ್ತು ಜಾತ್ರಾ ಮಹೋತ್ಸವದ ನಿಮಿತ್ಯ ಶನಿವಾರ ಮಹಾಲಿಂಗಪುರ ಹಿಂದೂ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಸ್ವಚ್ಛಗೊಳಿಸಿದರು.
ಮಹಾಲಿಂಗೇಶ್ವರ ಗೋಶಾಲೆಯಲ್ಲಿ 150ಕ್ಕೂ ಹೆಚ್ಚು ಗೋವುಗಳಿವೆ. ಇಲ್ಲಿನ ಹಿಂದೂ ಸಂಘಟನೆ ಕಾರ್ಯಕರ್ತರು ವಾರಕ್ಕೆ ಒಂದು ಅಥವಾ ಎರಡು ದಿನ ಗೋಶಾಲೆ ಸ್ವಚ್ಛತೆಯಲ್ಲಿ ಪಾಲ್ಗೊಳ್ಳುತ್ತಾರೆ. ಜೊತೆಗೆ ಯಾವುದೇ ಕಾರ್ಯಕರ್ತರ ಜನ್ಮ ದಿನದವನ್ನು ಗೋಶಾಲೆಯಲ್ಲಿ ಗೋಪೂಜೆ, ಹಣ್ಣು, ಮೇವು, ಹಿಂಡಿ ಹೀಗೆ ನಾನಾ ತರಹದ ಪದಾರ್ಥಗಳನ್ನು ನೀಡಿ ಗೋಶಾಲೆಯಲ್ಲಿ ಆಚರಿಸಿಕೊಂಡು ಗೋಮಾತೆ ಮತ್ತು ಗುರು ಮಹಾಲಿಂಗೇಶ್ವರರ ಆಶೀರ್ವಾದ ಪಡೆಯುತ್ತಾರೆ.
ಕಾರ್ಯಕರ್ತರಾದ ಬೈರೇಶ ಆದೆಪ್ಪನವರ, ಅರ್ಜುನ ಪವಾರ, ಮಂಜುನಾಥ ಭಾವಿಕಟ್ಟಿ, ಅಭಿಷೇಕ ಲಮಾಣಿ, ಶ್ರೀನಿಧಿ ಕುಲಕರ್ಣಿ, ಮಂಜು ಗೊಂಬಿ, ಮಹಾಲಿಂಗ ದೇಸಾಯಿ, ಅನಿಲ ಖವಾಸಿ, ಆನಂದ ಮಾಳವಾದೆ, ಶಶಿ ನಕಾತಿ, ರಾಘವೇಂದ್ರ ಪವಾರ, ರಾಘವೇಂದ್ರ ಶಿರೋಳ, ರಾಘು ಕಪರಟ್ಟಿ, ಬಸವರಾಜ ಮುರಾರಿ, ಕಿರಣ ದಲಾಲ, ಅಜೀತ ಮನ್ನಿಕೇರಿ ಸೇರಿದಂತೆ ಪತ್ರಕರ್ತರಾದ ಚಂದ್ರಶೇಖರ ಮೋರೆ, ಹನಮಂತ ನಾವಿ, ರಾಜೇಂದ್ರ ನಾವಿ ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು.
ಗೋಶಾಲೆ ಅಷ್ಟೇ ಅಲ್ಲದೆ ಕೆರೆ, ದೇವಸ್ಥಾನ, ಹಿಂದೂ ರುದ್ರಭೂಮಿಯ ಸ್ವಚ್ಛತೆಯ ಜೊತೆಗೆ ಸಮಾಜ ಸೇವೆಯಲ್ಲಿಯೂ ಪಾಲ್ಗೋಳ್ಳುತ್ತೇವೆ.ನಮ್ಮ ಜೊತೆಗೆ ಪತ್ರಕರ್ತರು ಕೂಡ ಭಾಗಿಯಾಗುತ್ತಿರುವುದು ಪ್ರೇರಣೆಯ ಸಂಗತಿ.
ರವಿ ಜವಳಗಿ. ಹಿಂದೂ ಸಂಘಟನೆ ಮುಖಂಡ, ಮಹಾಲಿಂಗಪುರ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 