ಕೆಇಬಿ ಸಿಬ್ಬಂದಿ ಕಾರ್ಯಕ್ಕೆ ಅಭಿನಂದನಾ ಸಮಾರಂಭ
ಲೋಕದರ್ಶನವರದಿ
ಹುನಗುಂದ14: ತಮ್ಮ ಜೀವನ್ನು ಕೈಯಲ್ಲಿ ಹಿಡಿದುಕೊಂಡು ಸಾರ್ವಜನಿಕ ಸೇವೆ ಮಾಡುತ್ತಿರುವ ಕೆಇಬಿ ಲೈನ್ಮನ್ ಸಿಬ್ಬಂದಿಯ ಕೆಲಸ ದೇವರ ಕೆಲಸ ಎಂದು ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಶ್ರೀಧರ ನಿರಂಜನ್ ಹೇಳಿದರು. ಇಲ್ಲಿನ ಕೆಇಬಿ ಕಚೇರಿಯಲ್ಲಿ ಸೂಳಿಬೆಲೆ ಚಕ್ರವತರ್ಿ ನೇತ್ರತ್ವದ ಯುವ ಬಿಗ್ರೇಡ್ ಹಮ್ಮಿಕೊಂಡ ಕೆಇಬಿ ಸಿಬ್ಬಂದಿ ಕಾರ್ಯಕ್ಕೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತ ನಮ್ಮ ಯುವ ಬ್ರಿಗೇಡ್ದಿಂದ ಪ್ರತಿವರ್ಷ ಸಮಾಜಕ್ಕೆ ಮುಕ್ತ ಸೇವೆ ನೀಡುವ ಇಲಾಖೆ ಸಿಬ್ಬಂದಿಗೆ ಅಭಿನಂದನೆ ತಿಳಿಸುವದು ಮಾನವೀಯ ಕೆಲಸವಾಗಿದೆ. ನಮಗೆ ಸಹನೆ ಮತ್ತು ತಾಳ್ಮೆ ಇದ್ದರೆ ಕೆಇಬಿ ಸಿಬ್ಬಂದಿಯಿಂದ ನಾವು ಬೆಳಕು ಕಾಣಲು ಸಾಧ್ಯ. ಅವರ ಜೊತೆ ಸಹನೆಯಿಂದ ವತರ್ಿಸಬೇಕೆಂದು ಅವರು ತಿಳಿಸಿದರು. ಎಇಇ ಬಾಲಾಜಿ ಸಿಂಗ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಾರ್ವಜನಿಕ ರಂಗದಲ್ಲಿ ನಮ್ಮ ಇಲಾಖೆಯಿಂದ ಪ್ರತಿಯೊಬ್ಬರಿಗೂ ನಮ್ಮ ಸೇವೆ ಅತ್ಯಗತ್ಯ ಎಂದರು. ಎಲ್ಲ ಲೈನ್ಮನ್ ಸಿಬ್ಬಂದಿಗೆ ಅಭಿನಂದನಾ ಪ್ರಮಾಣ ಪತ್ರ ವಿತರಿಸಲಾಯಿತು. ಯುವ ಬ್ರಿಗೇಡ್ ಕಾರ್ಯಕರ್ತರಾದ ವಿನಾಯಕ ಸಂಗಮ, ನಾಗೇಶ ಗಂಜೀಹಾಳ, ಕೆಇಬಿ ಸಿಬ್ಬಂದಿ ಬಿ.ಟಿ.ಹಿರೇಮಠ, ಮಹಾಂತೇಶ ಬಾಣಕದಿನ್ನಿ, ಬಸವರಾಜ ವಾಲೀಕಾರ, ಸುಶೀಲಕುಮಾರ ಮಲಗಿಹಾಳ ಇತರರು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 