ಕಾಕಾಸಾಹೇಬ ಪಾಟೀಲ ನಿಧನಕ್ಕೆ ಕೋರೆ ಸಂತಾಪ

ಕಾಕಾಸಾಹೇಬ ಪಾಟೀಲ ನಿಧನಕ್ಕೆ ಕೋರೆ ಸಂತಾಪ Condolences on the passing away of Kakasaheb Patil

ಬೆಳಗಾವಿ 19: ಸರಳ, ಸಜ್ಜನ ರಾಜಕಾರಣಿಯಾಗಿದ್ದ ಕಾಕಾಸಾಹೇಬ ಪಾಟೀಲ ಮಾತಿಗಿಂತ ಕೃತಿ ಮೇಲು ಎಂದು ನಂಬಿ ನಡೆದವರು. ತಮ್ಮ ಅಧಿಕಾರವಧಿಯಲ್ಲಿ ನಿಪ್ಪಾಣಿ ಗಡಿಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮೂಲಕ ಗಮನ ಸೆಳೆದವರು. ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ಹಾನಿ ತಂದಿದೆ. ಮಾದರಿ ವ್ಯಕ್ತಿತ್ವದ ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬ ಸದಸ್ಯರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ಸಿಗಲಿ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಕಂಬನಿ ಮಿಡಿದಿದ್ದಾರೆ.