ಹಾವೇರಿ:ಎ. 03: ರಾಷ್ರ್ಟೀಯ ವಿಪತ್ತು ನಿರ್ವಹಣಾ ಅಡಿಯಲ್ಲಿ ಕೋವಿಡ್-19 ವೈರಸ್ಗೆ ಸಂಬಂಧಿಸಿದಂತೆ ಭಾರತೀಯ ಅಂಚೆ ಇಲಾಖೆಯು ಅವಶ್ಯಕವಾದ ಸೇವೆಗಳನ್ನು ಜನರಿಗೆ ಒದಗಿಸಲು ಪಾರ್ಸಲ್ ಸೇವೆಯನ್ನು ಆರಂಭಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಧಾನ ಅಂಚೆ ಅಧೀಕ್ಷಕ ರಮೇಶ ಪ್ರಭು ಅವರು ಮನವಿ ಮಾಡಿಕೊಂಡಿದ್ದಾರೆ.
ಕೋವಿಡ್-19 ವೈರಸ್ನ ಹತೋಟಿಗಾಗಿ ಜನಸಾರಿಗೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಔಷಧಿ, ವೈದ್ಯಕೀಯ ಸಾಮಾಗ್ರಿಗಳ ಸಾಗಾಣಿಕೆ ಕಠಿಣವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಅಂಚೆ ಇಲಾಖೆಯು ಅವಶ್ಯಕವಾದ ಸೇವೆಗಳ ಅಡಿಯಲ್ಲಿ ಮನುಷ್ಯರ ಆರೋಗ್ಯಕ್ಕೆ ಅವಶ್ಯಕವಾಗಿರುವ ಔಷಧಿಗಳನ್ನು ಅಂಚೆ ಇಲಾಖೆಯ ಮುಖಾಂತರ ರೆಜಿಸ್ಟರ, ಸ್ಪೀಡ್, ಪಾರ್ಸಲ ಪೊಸ್ಟ ಮೂಲಕ ಕಳುಹಿಸಲು ವಿಶೇಷ ಸೌಲಭ್ಯ ಒದಗಿಸಲಾಗಿದೆ. ಗ್ರಾಹಕರು ಸಾಮಾಜಿಕ ಭದ್ರತಾ ಪಿಂಚಣಿ ಪಾವತಿ, ಅವಶ್ಯಕ ವಸ್ತುಗಳ ಬುಕಿಂಗ್ ಮತ್ತು ಸಾಗಣೆಯನ್ನು ಮಾಡಲಾಗುವುದು, ಅಂಚೆ ಕಛೇರಿಯಲ್ಲಿಯೇ ಬಟವಾಡೆ ಮಾಡುವ ವ್ಯವಸ್ಥೆ (ಘಟಿಜಠತಿ ಆಜಟತಜಡಿಥಿ), ಹಣಕಾಸಿನ ಸೇವೆಗಳು, ಜಮೆ ಮತ್ತು ಖಚರ್ಿನ ವ್ಯವಹಾರಗಳು, ಎ.ಟಿ.ಎಮ್ ಮೂಲಕ ವ್ಯವಹಾರ (ಪೊಸ್ಟ ಆಫೀಸ ಎ.ಟಿ.ಎಮ್ ಕಾರ್ಡಗಳನ್ನು ಇತರ ಬ್ಯಾಂಕ ಎ.ಟಿ.ಎಮ್ಗಳಲ್ಲಿ ಉಪಯೋಗಿಸಿ ಹಣ ಪಡೆಯಬಹುದು), ಗ್ರಾಮೀಣ ಭಾಗದಲ್ಲಿ ಎ.ಟಿ.ಎಮ್. ಇರದ ಪಕ್ಷದಲ್ಲಿ, ಮೈಕ್ರೊ ಎ.ಟಿ.ಎಮ್ (ಕಕಃ). ಮುಖಾಂತರ ಹಣಕಾಸಿನ ವ್ಯವಹಾರ ಮಾಡುವ ಸೌಲಭ್ಯ ಪಡೆಯಬಹುದಾಗಿದೆ.
ಗ್ರಾಮೀಣ ಭಾಗದಲ್ಲಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ, ಈ ಮೇಲಿನ ಅವಶ್ಯಕ ಸೇವೆಗಳನ್ನು ತಮ್ಮ ಹತ್ತಿರದ ಅಂಚೆ ಕಛೇರಿಗಳಿಗೆ ಸಮಯ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 02 ಗಂಟೆಯೊಳಗಾಗಿಗೆ ಭೇಟಿ ನೀಡಿ ಸೌಲಭ್ಯ ಪಡೆದುಕೊಳ್ಳುವಂತೆ ಕೋರಲಾಗಿದೆ.