ಎಬಿವಿಪಿ ವಿದ್ಯಾರ್ಥಿಗಳಿಂದ ಸ್ವಚ್ಚತಾ ಕಾರ್ಯಕ್ರಮ
Cleanliness program by ABVP students-Indi
ಇಂಡಿ 08: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂಡಿ ಶಾಖೆ ವತಿಯಿಂದ 162ನೇ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಸಪ್ತಾಹ ಕಾರ್ಯಕ್ರಮ, ಮೊದಲನೆಯ ಕಾರ್ಯಕ್ರಮ ಸ್ವಚ್ಚತಾ ಕಾರ್ಯಕ್ರಮ ಇಂಡಿ ಬಸ್ ನಿಲ್ದಾಣ ಮಾಡಲಾಯಿತು.
162ನೇ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಇಂಡಿ ನಗರದ ಬಸ್ಸ್ ನಿಲ್ದಾಣವನ್ನು ಸ್ವಚ್ಛ ಗೊಳಿಸಲಾಯಿತು. ನಮಗೆಲ್ಲಾ ತಿಳಿದಿರುವಂತೆ ಸ್ವಚ್ಛತೆ ನೈರ್ಮಲ್ಯ ಹಾಗು ಆರೋಗ್ಯ ನಡುವೆ ಪರಸ್ಪರ ಆಳವಾದ ಸಂಬಂಧವಿದೆ. ಸಾಮಾನ್ಯವಾಗಿ ಕೆಲವಂದು ಸಾಂಕ್ರಾಮಿಕ ರೋಗಗಳು ಸ್ವಚ್ಛತೆ ಇಲ್ಲದ ಕಾರಣಗಳಿಂದ ಹರಡುತ್ತವೆ, ಇದನ್ನು ಮನಗೊಂಡು ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಬಿವಿಪಿ ಇಂಡಿ ಶಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ಹಾಗೂ ಎಬಿವಿಪಿ ಕಾರ್ಯಕರ್ತರಿಗೆ ಸೇವಾ ಮನೋಭಾವ ಮೂಡಿಸುವ ದೃಷ್ಟಿಯಿಂದ ಇಂಡಿ ನಗರದ ಬಸ್ ನಿಲ್ದಾಣ ಸ್ವಚ್ಛತೆ ಗೊಳಿಸಲಾಯಿತು ಎಂದು ಪ್ರಾಂತ್ಯ ಕಾರ್ಯಕಾರಣಿ ಸದಸ್ಯರಾದ ಸಚೀನ ಧಾನಗೊಂಡ ಹೇಳಿದರು. ಈ ಸಂದರ್ಭದಲಿ ಎಬಿವಿಪಿ ಇಂಡಿ ಶಾಖೆಯ ನಗರ ಉಪಾಧ್ಯಕ್ಷರು ಶಿವನಂದ ಕಾಮಗೊಂಡ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಹುಲ್ ಜಾಧವ, ಅಂಬರೀಷ್ ಬಿರಾದಾರ, ಸೋಮನಾಥ ಕಟಗೇರಿ, ಸಾರ್ವಭೌಮ ಸಾಳುಂಕೆ,ಸಂದೀಪ ಕಲ್ಯಾಣಿ, ಸಾಹೀಬ್ ನಧಾಪ್, ವಿನಯ್ ಮೈದರಗಿ, ಮಲ್ಲಿಕಾರ್ಜುನ ಪತ್ತಾರ, ಮಹೇಶ್ ಮುನಾಳಿ, ದೀಪಾ ಗಿರಣಿವಡ್ಡರ, ಪ್ರೇಮಾ ಹೂಗಾರ, ಸಾವಿತ್ರಿ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 