ಶಾಲಾ ಮಕ್ಕಳಿಗೆ ಅರಣ್ಯ ಇಲಾಖೆ ವತಿಯಿಂದ ಚಿಣ್ಣರ ವನ ದರ್ಶನ ಕಾರ್ಯಕ್ರಮ

ಮುಂಡರಗಿ 16: ತಾಲೂಕಿನ ಬಿದರಹಳ್ಳಿ ಗ್ರಾಮದ ಶಾಲಾ ಮಕ್ಕಳಿಗೆ ಅರಣ್ಯ ಇಲಾಖೆ ವತಿಯಿಂದ ಚಿಣ್ಣರ ವನ ದರ್ಶನ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ 2 ದಿನದ ಬಿಂಕದಕಟ್ಟಿ, ದಾಂಡೇಲಿ, ಕ್ಯಾಸಲ್ ರಾಕ್, ಮೌಲಿಂಗ ಪಾರ್ಕ್‌, ಕೆನೋಪಿ ವಾಕ್, ಉಳವಿ ಚನ್ನಬಸವೇಶ್ವರ ದೇವಸ್ಥಾನ ಅರಣ್ಯ ಅದ್ಯಯನ ಪ್ರವಾಸಕ್ಕೆ ಶಿರಹಟ್ಟಿ ಶಾಸಕ ಡಾ.ಚಂದ್ರು. ಲಮಾಣಿ ಸೂಚನೆಯ ಮೇರೆಗೆ ಮಾಜಿ ಜಿ.ಪಂ.ಸದಸ್ಯರು ಮುಂಡರಗಿ ಮಂಡಲ ಬಿಜೆಪಿ ಅಧ್ಯಕ್ಷ ಹೇಮಗೀರೀಶ ಹಾವಿನಾಳ ಹಾಗೂ ಬಿದರಹಳ್ಳಿ ಗ್ರಾ.ಪಂ. ಅಧ್ಯಕ್ಷ ಸುನಿತಾ ಹಾರೋಗೆರಿ ಅವರೊಂದಿಗೆ ಪ್ರವಾಸಕ್ಕೆ ಮಕ್ಕಳಿಗೆ ಶುಭ ಕೋರಿ ಚಾಲನೆ ನೀಡಲಾಯಿತು. ಈ ವೇಳೆ ರವಿ ಲಮಾಣಿ. ಎಸ್‌.ಟಿ ಮೋರ್ಚಾದ ಅಧ್ಯಕ್ಷ ಮಾರುತಿ ನಾಗರಹಳ್ಳಿ, ಬಾಗೆವಾಡಿ ಗ್ರಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಣಜಿ, ಮುಖ್ಯ ಗುರುಗಳಾದ ಪಿ.ಟಿ.ಜಾದವ್, ಎಸ್‌.ಡಿ.ಎಮ್‌.ಸಿ ಅಧ್ಯಕ್ಷ ಸರ್ವ ಸದಸ್ಯರು ಹಾಗೂ ಗ್ರಾ.ಪಂ ಸರ್ವ ಸದಸ್ಯರು, ಅರಣ್ಯ ಅಧಿಕಾರಿ ಸೋಮನಗೌಡ ಪಾಟೀಲ ಹಾಗೂ  ಊರಿನ ಗುರು-ಹಿರಿಯರು ಪಕ್ಷದ ಮುಖಂಡರು ಹಾಗೂ ಯುವಕ ಮಿತ್ರರು ಉಪಸ್ಥಿತರಿದ್ದರು.