ಮಕ್ಕಳಿಗೆ ಆಟದೊಂದಿಗೆ ಪಾಠವನ್ನು ಬೋಧಿಸಬೇಕು
ಲೋಕದರ್ಶನ ವರದಿ
ರಾಯಬಾಗ 31: ಚಿಕ್ಕಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಅವರಿಗೆ ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಆಟದೊಂದಿಗೆ ಪಾಠವನ್ನು ಬೋಧಿಸಬೇಕೆಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎ.ಭಜಂತ್ರಿ ಹೇಳಿದರು.
ಶುಕ್ರವಾರ ಪಟ್ಟಣದ ಕೆಇಬಿ ರಸ್ತೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ವಿದ್ಯಾಚೇತನ ಆಂಗ್ಲ ಮಾಧ್ಯಮ ನರ್ಸರಿ, ಎಲ್ಕೆಜಿ ಮತ್ತು ಯುಕೆಜಿ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನರ್ಸರಿ ಶಾಲೆ ಮಕ್ಕಳು ಆಟ-ಪಾಠಗಳನ್ನು ಕಲಿಯರು ಒಳ್ಳೆ ವಾತಾವರಣದ ಪರಿಸರವನ್ನು ನಿರ್ಮಿಸಬೇಕೆಂದರು.
ಬಾವನಸೌಂದತ್ತಿ ಓಂಕಾರ ಆಶ್ರಮದ ಮಾತ್ರೋಶ್ರಿ ಬ್ರಹ್ಮಾಂಬಿಕಾ ಅವರು ಮಾತನಾಡಿ, ಎಳೆವಯಸ್ಸಿನ ಮುದ್ದು ಮಕ್ಕಳಲ್ಲಿ ಒಳ್ಳೆ ನಡೆ, ನುಡಿ, ಸಂಸ್ಕೃತಿ, ಸಂಸ್ಕಾರಗಳನ್ನು ಬಿತ್ತಿ, ಅವರನ್ನು ಸಮಾಜದಲ್ಲಿ ಒಳ್ಳೆ ಸತ್ಪಜ್ರೆಗಳನ್ನಾಗಿ ಮಾಡಲು ತಂದೆ, ತಾಯಿ, ಗುರುಗಳು ಶ್ರಮಿಸಬೇಕೆಂದರು.
ವಿದ್ಯಾ ನಾಯಿಕ, ನ್ಯಾಯವಾದಿಗಳಾದ ಎಸ್.ಎಸ್.ನಾಯಿಕ, ಎಮ್.ಕೆ.ಖೊಂಬಾರೆ, ಆರ್.ಟಿ.ನಾಗರಾಳೆ, ಪಿ.ಆರ್.ಗುಡೋಡಗಿ, ಎಸ್.ಬಿ.ಹೊಳ್ಕರ, ಬಿ.ಎಸ್.ಗಡ್ಡೆ, ಎಮ್.ಜಿ.ಉಗಾರೆ, ಸಿ.ಬಿ.ಭುಸಗುಂಡೆ ಹಾಗೂ ಕಲಂದರ ಅತ್ತಾರ, ಸಂಗಪ್ಪ ಉಳ್ಳಾಗಡ್ಡಿ, ಚೇತನ ನಾಯಿಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 