ಕೊರೊನಾ ಪ್ಯಾಕೇಜ್‌ನಡಿ ಬಡವರಿಗೆ ೧.೭೦ಲಕ್ಷ ಕೋಟಿ ರೂಪಾಯಿ ಕೇಂದ್ರ ಸರ್ಕಾರ ನೆರವು

ಕೊರೊನಾ  ಪ್ಯಾಕೇಜ್‌ನಡಿ  ಬಡವರಿಗೆ ೧.೭೦ಲಕ್ಷ  ಕೋಟಿ ರೂಪಾಯಿ  ಕೇಂದ್ರ  ಸರ್ಕಾರ  ನೆರವು

ನವದೆಹಲಿ,  ಮಾ ೨೬, ಕೊರೊನಾ  ವೈರಸ್   ವಿಪತ್ತಿನಿಂದ   ದೇಶದ ಆರ್ಥಿಕ  ವ್ಯವಸ್ಥೆ   ಚೇತರಿಸಿಕೊಳ್ಳುವಂತೆ ಮಾಡಲು   ಕೇಂದ್ರ  ಸರ್ಕಾರ  ೧.೭೦ ಲಕ್ಷ ಕೋಟಿ ರೂ.   ಪ್ಯಾಕೇಜ್    ಪ್ರಕಟಿಸಿದೆ ಈ ಸಂಬಂಧ   ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಗುರುವಾರ   ನಡೆಸಿದ  ಮಾಧ್ಯಮ ಸಮೀಕ್ಷೆಯಲ್ಲಿ    ಹಲವು ಪ್ರಮುಖ  ಕ್ರಮಗಳನ್ನು ಪ್ರಕಟಿಸಿದ್ದಾರೆ.
 ಕೊರೊನಾ ವೈರಸ್  ನಿಯಂತ್ರಿಸಲು  ಸರ್ಕಾರ  ಅತ್ಯಂತ  ಪ್ರಾಮಾಣಿಕತೆಯಿಂದ   ಕೆಲಸ ಮಾಡುತ್ತಿದೆ   ಎಂದು ಅವರು  ಹೇಳಿದ್ದಾರೆ.
 ಉಪಶಮನ ಕ್ರಮಗಳು
1 ಕೊರೊನಾ  ಪ್ಯಾಕೇಜ್ ಅಡಿಯಲ್ಲಿ   ಬರುವ  ಬಡವರಿಗೆ ೧.೭ ಲಕ್ಷ   ಕೋಟಿ ರೂಪಾಯಿ ನೆರವು.
2  ಪ್ರಧಾನಿ ಗರಿಬ್ ಕಲ್ಯಾಣ್ ಯೋಜನೆಯಡಿ  ಬಡವರಿಗೆ ನೆರವು.
3  ಕೊರೊನಾ ಪ್ರಕರಣಗಳಲ್ಲಿ   ಕಾರ್ಯನಿರ್ವಹಿಸುವ ಆರೋಗ್ಯ ಸಹಾಯಕರಿಗೆ ೫೦ ಲಕ್ಷ ಆರೋಗ್ಯ ವಿಮೆ.
4 ಪ್ರಧಾನಿ ಗರಿಬ್ ಕಲ್ಯಾಣ್ ಆನ್ ಯೋಜನೆ ಮೂಲಕ ೩ ತಿಂಗಳವರೆಗೆ ೮೦ ಕೋಟಿ ಮಂದಿಗೆ ಪಡಿತರ ವಿತರಣೆ.
5 ಈಗ ನೀಡುತ್ತಿರುವ ೫ ಕೆಜಿಗೆ  ಹೆಚ್ಚುವರಿಯಾಗಿ  ೫ ಕೆಜಿ  ಅಕ್ಕಿ ಅಥವಾ ಗೋಧಿ ಪೂರೈಕೆ.
6 ಇವುಗಳ ಜತೆಗೆ ಒಂದು ಕೆಜಿ ದ್ವಿದಳ ಧಾನ್ಯ  ಸಹ ಪೂರೈಸಲಾಗುವುದು.
  ಬಡವರ  ಬ್ಯಾಂಕ್   ಖಾತೆಗಳಿಗೆ ನೇರ ನಗದು ವರ್ಗಾವಣೆ.
7 ಪಿಎಂ ಕಿಸಾನ್  ಯೋಜನೆಯಡಿ  ಅವರ ಅಡಿಯಲ್ಲಿ,  ಸರ್ಕಾರ ಈಗಾಗಲೇ ರೈತರಿಗೆ ವರ್ಷಕ್ಕೆ ೬,೦೦೦ ರೂ  ನೀಡುತ್ತಿದೆ.
8 ಮೊದಲ ಕಂತಾಗಿ  ೨ ಸಾವಿರೂಪಾಯಿ  ಹಣವನ್ನು  ರೈತರ ಖಾತೆಗಳಿಗೆ  ತಕ್ಷಣ ಜಮಾಗೊಳಿಸಲು ನಿರ್ಧರಿಸಿದೆ.