ಲೋಕದರ್ಶನವರದಿ
ಬ್ಯಾಡಗಿ14: ಡಾ. ಅಂಬೇಡ್ಕರ್ ಅವರ ಆಶಯದಂತೆ ಏಕ ರೀತಿಯ ನ್ಯಾಯ, ನಿಯಮಗಳು ಹಿಂದೂಗಳ ಸಾಮಾಜಿಕ ಮತ್ತು ಆಥರ್ಿಕ ಜೀವನವನ್ನು ನಿಯಂತ್ರಿಸುವುದು ದೇಶದ ಏಕತೆಯ ದೃಷ್ಟಿಯಿಂದ ಲಾಭವಾಗಬೇಕು ಎನ್ನುವ ಮಾತು ಉತ್ತಮ ಸಂದೇಶವಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಸ್ಥಳೀಯ ತಾಲೂಕ ಕಛೇರಿಯಲ್ಲಿ ತಾಲೂಕಾ ಆಡಳಿತದ ವತಿಯಿಂದ ಸರಳವಾಗಿ ಏರ್ಪಡಿಸಿದ್ದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 129 ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಅಗ್ರಗಣ್ಯರಾಗಿರುವ ಡಾ. ಅಂಬೇಡ್ಕರ್ ದೇಶವು ಎಂದೂ ಮರೆಯದ ನಾಯಕರಲ್ಲಿ ಒಬ್ಬರಾಗಿದ್ದಾರೆ.
ದೇಶದ ಸಮಗ್ರ ಅಭಿವೃದ್ಧಿಗಾಗಿ ಭಾರತದ ಸಂವಿಧಾನವನ್ನು ರಚಿಸಿದ ಇವರು ಸಂವಿಧಾನ ಶಿಲ್ಪಿಯಾಗಿ ಹೊರ ಹೊಮ್ಮುವ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು.
ತಾ. ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಸಾಮಾಜಿಕ, ಆಥರ್ಿಕ ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾನತೆಯ ಹಕ್ಕನ್ನು ಕಲ್ಪಿಸಿಕೊಟ್ಟಿರುವ ಅಂಬೇಡ್ಕರ ಅವರನ್ನು ದೇಶದ ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಶರಣಮ್ಮ ಕಾರಿ, ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿ ಆಬಿದ್ ಗದ್ಯಾಳ, ಸಮಾಜ ಕಲ್ಯಾಣಾಧಿಕಾರಿ ಪುಂಡಲೀಕ ಮಾನವರೆ, ಎಪಿಎಂಸಿ ಸದಸ್ಯ ವಿಜಯ ಮಾಳಗಿ, ಸಮಾಜದ ಮುಖಂಡರಾದ ಸುರೇಶ ಆಸಾದಿ, ನಾಗರಸಾಜ ಹಾವನೂರ, ವಿಷ್ಣುಕಾಂತ ಬೆನ್ನೂರ, ಫರೀದಾ ನದ್ದಿಮಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.