ಬಂದರು ಟ್ರಸ್ಟ್, ಹಡಗುಕಟ್ಟೆ ಕಾರ್ಮಿಕ ಮಂಡಳಿ ಉದ್ಯೋಗಿಗಳಿಗೆ ಪಿಎಲ್ಆರ್ ಯೋಜನೆ ವಿಸ್ತರಣೆಗೆ ಸಚಿವ ಸಂಪುಟ ಒಪ್ಪಿಗೆ
ನವದೆಹಲಿ, ಜ 29: ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲವೇ ತಿದ್ದುಪಡಿ ಮಾಡುವವರೆಗೆ ಸದ್ಯ, ಅಸ್ತಿತ್ವದಲ್ಲಿರುವ ಉತ್ಪಾದಕತೆ ಜೋಡಣೆ ಪುರಸ್ಕಾರ (ಪಿಎಲ್ಆರ್) ಯೋಜನೆಯನ್ನು 2017-18ರ ಆಚೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಈ ಯೋಜನೆಯಿಂದ ವಾರ್ಷಿಕವಾಗಿ 28,821 ಪ್ರಮುಖ ಬಂದರು ಟ್ರಸ್ಟ್ಗಳು ಮತ್ತು ಹಡಗುಕಟ್ಟೆ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ. ಪ್ರಸ್ತುತ ವೇತನ ಮಿತಿಯಲ್ಲಿ ತಿಂಗಳಿಗೆ 7,000 ರೂ.ನಂತೆ ಉತ್ಪಾದಕತೆ ಸಂಯೋಜನೆ ಪುರಸ್ಕಾರ ಲೆಕ್ಕಹಾಕಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಯೋಜನೆಯು ಉತ್ತಮ ಉತ್ಪಾದಕತೆಯನ್ನು ಉತ್ತೇಜಿಸುವುದರೊಂದಿಗೆ ಬಂದರು ವಲಯದಲ್ಲಿ ಉತ್ತಮ ಕೈಗಾರಿಕಾ ಸಂಬಂಧ ಮತ್ತು ಕೆಲಸದ ವಾತಾವರಣವನ್ನು ಬೆಳೆಸುತ್ತಿದೆ.
ಪ್ರಮುಖ ಬಂದರು ಟ್ರಸ್ಟ್ಗಳು ಮತ್ತು ಹಡಗುಕಟ್ಟೆ ಮಂಡಳಿ ಉದ್ಯೋಗಿಗಳಿಗೆ ಉತ್ಪಾದಕತೆ ಸಂಯೋಜನೆಯ ಪುರಸ್ಕಾರ ನೀಡುವ ಯೋಜನೆ ಅಸ್ತಿತ್ವದಲ್ಲಿದೆ. ಇದರಲ್ಲಿ ಉತ್ಪಾದಕತೆ ಸಂಯೋಜನೆ ಪುರಸ್ಕಾರವನ್ನು ಸಂಯೋಜಿತ ಬಂದರುಗಳ ಕಾರ್ಯಕ್ಷಮತೆ ಸೂಚ್ಯಂಕದ ಆಧಾರದ ಮೇಲೆ ನೀಡಲಾಗುತ್ತದೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 