ಸಂಘಟನೆಗೆ ಶಕ್ತಿ ತುಂಬುವ ಮೂಲಕ ಸಮರ್ಥಕವಾಗಿ ಮುನ್ನಡಿಸಬೇಕು : ವಾಜೀದ್ ಹಿರೇಕುಡಿ

ಅಥಣಿ 01:  ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ  ಎಚ್‌. ಶಿವರಾಮೇಗೌಡರ  ನೇತೃತ್ವದಲ್ಲಿ  ಸಂಘಟನೆ, ಈಗಾಗಲೇ ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದಿದೆ. ಅವರ ಮಾರ್ಗದರ್ಶನದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ವಿವಿಧ ಜಿಲ್ಲೆಗಳಲ್ಲಿ ಕನ್ನಡ ಪರ ಹೋರಾಟ, ಕಾರ್ಯಕರ್ತರ ಸಮಾವೇಶ, ಕನ್ನಡ ಪರ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತಿವೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ನಮ್ಮ ಕರವೇ  ಸಂಘಟನೆ ಬಲವರ್ಧನೆಗೆ ಒತ್ತು ನೀಡಲಾಗಿದ್ದು, ಕರವೇ ನೂತನ ಪದಾಧಿಕಾರಿಗಳು ಸಂಘಟನೆಗೆ ಇನ್ನಷ್ಟು ಶಕ್ತಿ ತುಂಬುವ ಮೂಲಕ ಸಮರ್ಥವಾಗಿ ಮುನ್ನಡಿಸಬೇಕು ಎಂದು ಬೆಳಗಾವಿ ಕರವೇ  ಜಿಲ್ಲಾಧ್ಯಕ್ಷ ವಾಜೀದ್ ಹಿರೇಕುಡಿ ಹೇಳಿದರು. ಅವರು ಅಥಣಿ ಪಟ್ಟಣದಲ್ಲಿ ಶಿವರಾಮೇಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರವೇ  ಸಂಘಟನೆಯ ಅನೇಕ ಶಾಖೆಗಳು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಕನ್ನಡದ ಸೇವೆ, ಕನ್ನಡಿಗರ ಕಾಳಜಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಸಂಘಟನೆಯ ಸಂಸ್ಥಾಪಕರು ನನಗೆ ಕಿತ್ತೂರು  ಕರ್ನಾಟಕ ಭಾಗದಲ್ಲಿ  ಸಂಘಟನೆಯ ಬಲವರ್ಧನೆಗೆ  ಹೆಚ್ಚು ಒತ್ತು ನೀಡಲು ಆದೇಶಿಸಿದ್ದಾರೆ.  ಮುಂಬರುವ ದಿನಗಳಲ್ಲಿ ಬೆಳಗಾವಿ  ಜಿಲ್ಲೆಗಳಲ್ಲಿ ಸಂಘಟನೆಯ ಕಾರ್ಯ ಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚಿಸಲಾಗುವುದು. 

ಇಲ್ಲಿಯ ಸಮಸ್ಯೆಗಳ ವಿರುದ್ಧ ಹೋರಾಟ ಹಮ್ಮಿಕೊಂಡ ಸರಕಾರದ ಗಮನ ಹರಿಸುವಲಾಗುವುದು ಎಂದು ಹೇಳಿದರು. ಅಥಣಿ ತಾಲೂಕಿನಲ್ಲಿ ಕಳೆದ 15 ವರ್ಷಗಳಿಂದ ಅಣ್ಣಾಸಾಬ ತೆಲಸಂಗ ಅವರ ಮುಂದಾಳತ್ವದಲ್ಲಿ  ಉತ್ತಮ ರೀತಿಯಲ್ಲಿ ಜನಪರ ಕಾಳಜಿಯೊಂದಿಗೆ  ಹೋರಾಟಗಳನ್ನು ಮಾಡುತ್ತಾ  ಬರಲಾಗಿದ್ದು, ಅವರನ್ನು ಈಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದ್ದು, ಅಥಣಿ ತಾಲೂಕ ಸಂಘಟನೆಗೆ ನೂತನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಉದಯ ಮಾಕಾಣಿ ಅವರ ಮುಂದಾಳತ್ವದಲ್ಲಿ  ಪ್ರತಿ ಹಳ್ಳಿ ಹಳ್ಳಿಗಳಲ್ಲೂ  ಗ್ರಾಮ ಶಾಖೆಗಳನ್ನು ಆರಂಭಿಸಿ ಸಂಘಟನೆಯನ್ನು  ಬಲಪಡಿಸುವುದರ ಜೊತೆಗೆ  ನಮ್ಮ ಉಸಿರಿನ ಮತ್ತು ಅನ್ನದ ಭಾಷೆಯಾಗಿರುವ  ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ  ತಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಕರೆ ನೀಡಿದರು. ನೂತನ ಪದಾಧಿಕಾರಿಗಳ ಆಯ್ಕೆ  ನಿಕಟಪೂರ್ವ ಅಧ್ಯಕ್ಷ  ಅಣ್ಣಾಸಾಬ ತೆಲಸಂಗ ಅವರನ್ನು ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಆದೇಶ ಪತ್ರ ವಿತರಿಸಲಾಯಿತು. 

ಅಥಣಿ ತಾಲೂಕ ಘಟಕದ ನೂತನ ಅಧ್ಯಕ್ಷ ಸ್ಥಾನಕ್ಕೆ ಉದಯ ಮಾಕಾಣಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜು ವಾಘಮಾರೆ, ತೆಲಸಂಗ  ಹೋಬಳಿ ಅಧ್ಯಕ್ಷ ಮಹಂತೇಶ್ ಹಲವಾಯಿ, ಅನಂತಪುರ ಹೋಬಳಿ ಅಧ್ಯಕ್ಷ  ಅನಿಲ ಪಾಟೀಲ, ಸಂಘಟನಾ ಕಾರ್ಯಧ್ಯಕ್ಷರಾಗಿ ಸಿದ್ದು ಹಂಡಗಿ, ಸಹ ಕಾರ್ಯದರ್ಶಿಯಾಗಿ  ಸುಕುಮಾರ ಮಾದರ ಪದಗ್ರಹಣ ಸ್ವೀಕರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ   ಅಣ್ಣಾಸಾಬ ತೆಲಸಂಗ ಮತ್ತು  ಅಥಣಿ ಘಟಕದ ಅಧ್ಯಕ್ಷ  ಉದಯ ಮಹಾಕಾಣಿ ಮಾತನಾಡಿ ಅಥಣಿ ತಾಲೂಕಿನಲ್ಲಿ ಕನ್ನಡಪರ ಹೋರಾಟ, ಕಾರ್ಯಕ್ರಮಗಳನ್ನು ಮಾಡುವಲ್ಲಿ ಸಹಾಯ ಸಹಕಾರ ನೀಡಿದ ಎಲ್ಲಾ ಕನ್ನಡಪರ ಮನಸ್ಸುಗಳಿಗೆ, ನಮ್ಮ ಕಾರ್ಯಕರ್ತರಿಗೆ ಧನ್ಯವಾದಗಳನ್ನು  ಸಲ್ಲಿಸಲು ಬಯಸುತ್ತೇನೆ. 

ಮುಂಬರುವ ದಿನಗಳಲ್ಲಿ ನೂತನ ಅಧ್ಯಕ್ಷ  ಉದಯ ಮಾಕಾಣಿ ಮುಂದಾಳತ್ವದಲ್ಲಿ ನಡೆಯುವ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ, ಕನ್ನಡಪರ ಹೋರಾಟಗಳಿಗೆ ಸಹಾಯ ಸಹಕಾರ ನೀಡಬೇಕೆಂದು ಕರೆ ನೀಡಿದರು.   ಈ  ಸಂದರ್ಭದಲ್ಲಿ  ಬೆಳಗಾವಿ ಜಿಲ್ಲಾ  ಮಹಿಳಾ ಘಟಕದ  ಅಧ್ಯಕ್ಷ  ಅನ್ನಪೂರ್ಣ ಅಶೋಕರ, ಜಿಲ್ಲಾ ಗೌರವಾಧ್ಯಕ್ಷ  ಜಗನ್ನಾಥ ಭಾಮನೆ, ರೇಣುಕಾ, ಶಾಹಿದ್ ಅಟೇಲ್, ಮಾರುತಿ ಮನೋಜ್, ಸಿದ್ದು ಹಂಡಗಿ, ಕುಮಾರ್ ಬಡಿಗೇರ, ಸತೀಶ ಯಲ್ಲಟ್ಟಿ,  ಶಂಕರ ಮಗದುಮ, ಮಹಾಂತೇಶ ಹಲವಾಯಿ, ಅನಿಲ ಪಾಟೀಲ, ರಾಜು ವಾಘಮಾರೆ, ಸುಕುಮಾರ ಮಾದರ, ಪರಶುರಾಮ ಕಾಂಬಳೆ, ಜಿಶಾನ್ ಮುಜಾವರ, ಮುತ್ತಣ್ಣ ಗೊಲ್ಲರ, ಮಹಾದೇವಿ ಹೋಳಿಕಟ್ಟಿ, ಭೀಮವ್ವ ದಂಡಗಿ, ಶೋಭಾ ಮಾಳಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಉದಯ ಮಾಕಾಣಿ ಸ್ವಾಗತಿಸಿದರು. ಅಣ್ಣಾಸಾಬ ತೆಲಸಂಗ ನಿರೂಪಿಸಿದರು.ರಾಜು ವಾಘಮಾರೆ ವಂದಿಸಿದರು.