ಬಸ್ ಪಲ್ಟಿ: ತಪ್ಪಿದ ಭಾರಿ ಅನಾಹುತ
Bus overturns: A major disaster averted
ಜಮಖಂಡಿ 23: ತಾಲ್ಲೂಕಿನ ಸಮೀಪ ಹಿಪ್ಪರಗಿ ಬ್ಯಾರೇಜ್ ಬಳಿ ಸಾರಿಗೆ ಬಸ್ ಪಲ್ಟಿಯಾಗಿ ಬಿದ್ದು ಭಾರಿ ಅನಾಹುತ ತಪ್ಪಿದೆ.
ಜಮಖಂಡಿಯಿಂದ ಅಥಣಿ ಮಾರ್ಗವಾಗಿ ಚಲಿಸುವ ಸಾರಿಗೆ ಬಸ್ ಹಿಪ್ಪರಗಿ ಬ್ಯಾರೇಜ್ ಬಳಿ ಹೋಗುತ್ತಿದಂತೆ ಬಸ್ನ ಎಕ್ಸಲ್ ಪಾಟಾ ಕಟ್ಟಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದು. ಜಮಖಂಡಿಯಿಂದ ಅಥಣಿಗೆ ಕಡೆಗೆ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ನಲ್ಲಿ 6 ಜನ ಪ್ರಯಾಣಿಕರು ಇದ್ದು. ಚಾಲಕ ಹಾಗೂ ನಿರ್ವಾಹಕನಿಗೆ ಸಣ್ಣಪುಟ್ಟ ಗಾಯಗಳು ಆಗಿದ್ದು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರುವುದಿಲ್ಲ.
ಘಟನಾ ಸ್ಥಳಕ್ಕೆ ಘಟಕ ವ್ಯವಸ್ಥಾಪಕ ಬಿ,ಎನ್, ಗಸ್ತಿ, ಸಾರಿಗೆ ನಿಯಂತ್ರಿಕ ವಿಠ್ಠಲ ಕಾಂಬಳೆ, ಪಾಯಗೊಂಡ, ಮೆಕ್ಯಾನಿಕಲ್ ಮಸಿಬಿನಾಳ ಸೇರಿದಂತೆ ಸಿಬ್ಬಂದಿಗಳು ಪಲ್ಟಿಯಾಗಿರುವ ಬಸ್ ಮೇಲಕ್ಕೆ ಎತ್ತಲು ಕ್ರೈನ್ದ ಯಂತ್ರವನ್ನು ಬಳಸಲಾದೆ. ಬಸ್ ಯಾವಕಾರಣಕ್ಕೆ ಪಲ್ಟಿಯಾಗಿದ್ದು ನಿಖರವಾದ ಮಾಹಿತಿ ತಿಳಿದು ಬಂದಿರುವುದಿಲ್ಲ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 