ಬೋಟ್ ಮುಳುಗಿ ಲಕ್ಷಾಂತರ ಹಾನಿ

 ಬೋಟ್ ಮುಳುಗಿ ಲಕ್ಷಾಂತರ ಹಾನಿ Boat sinks, causing millions in damage

ಲೋಕದರ್ಶನ ವರದಿ 

ಬೋಟ್ ಮುಳುಗಿ ಲಕ್ಷಾಂತರ ಹಾನಿ 

ಕಾರವಾರ 09: ಅಂಕೋಲಾ  ತಾಲೂಕಿನ ಬೇಲೇಕೇರಿ ಬಂದರಿನಲ್ಲಿ ಲಂಗರು ಹಾಕಲಾಗಿದ್ದ ಶಾರದಾಂಬ ಹೆಸರಿನ ಪರ್ಸಿನ್ ಮೀನುಗಾರಿಕಾ ಬೋಟ್ ಗುರುವಾರ ಬೆಳಗಿನ ಜಾವ ಅಲೆಗಳ ತೀವ್ರತೆಗೆ ಮುಳುಗಡೆಯಾಗಿರುವ ಘಟನೆ ಸಂಭವಿಸಿದೆ.  

ಸರಸ್ವತಿ ಅಶೋಕ ಬಾನಾವಳಿಕರ ಅವರ ಅಧೀನದಲ್ಲಿದ್ದ ಈ ಬೋಟ್ ಸಮುದ್ರದ ಅಲೆಗಳ ಅಬ್ಬರಕ್ಕೆ ಮುಳುಗಿ, ಒಳಗೆ ನೀರು ತುಂಬಿ  ಮುಳುಗಡೆಯಾಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ. ಬೋಟ್‌ನ ಎಂಜಿನ್, ಬಲೆಗಳು ಹಾಗೂ ಇತರ ಉಪಕರಣಗಳು ಹಾನಿಯಾಗಿವೆ. ಬೇಲೇಕೇರಿ  ಗ್ರಾಮದ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದು ಬಂದರಿನಲ್ಲಿ ಅಲೆ ತಡೆಗೋಡೆ (ಬ್ರೇಕ್‌ವಾಟರ್) ಸೌಲಭ್ಯ ಇಲ್ಲದ ಕಾರಣ ಇಂತಹ ಘಟನೆಗಳು ಆಗಾಗ ನಡೆಯುತ್ತಿವೆ. ಭಾರೀ ಗಾತ್ರದ ಅಲೆಗಳಿಂದ ಬಂದರಿನಲ್ಲಿ ನಿಲ್ಲಿಸಿದ ಬೋಟ್‌ಗಳಿಗೂ ಅಪಾಯ ಉಂಟಾಗುತ್ತಿದೆ. ಹೀಗಾಗಿ ಅಲೆ ತಡೆಗೋಡೆ  ನಿರ್ಮಿಸಲು  ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ.