ಅನ್ನದಾನ, ವಿದ್ಯಾದಾನಕ್ಕಿಂತ ಶ್ರೇಷ್ಠವಾದದ್ದು ರಕ್ತದಾನ: ರವೀಂದ್ರ ಗಾಣಿಗೇರ
ಲೋಕದರ್ಶನ ವರದಿ
ಮೋಳೆ: ರಕ್ತದಾನವು ಅನ್ನದಾನ ಹಾಗೂ ವಿದ್ಯಾದಾನಕ್ಕಿಂತ ಶ್ರೇಷ್ಠವಾದುದು, ರಕ್ತದಾನ ಮಾಡಿದರೆಹೊಸ ಚೈತನ್ಯ ಹಾಗೂ ಉತ್ತಮ ಗುಣಗಳು ತಾನಾಗಿಯೇ ಬರುತ್ತವೆ ಎಂದು ಪಟ್ಟಣ ಪಂಚಾಯತ್ ಉಪಾಧ್ಯಕ್ಷ ರವೀಂದ್ರ ಗಾಣಿಗೇರ ಹೇಳಿದರು.
ಐನಾಪುರ ಪಟ್ಟಣದಲ್ಲಿ ಕನರ್ಾಟಕ ರಾಜ್ಯೋತ್ಸವದ ನಿಮಿತ್ಯ ನವ್ಯಸ್ಪೂತರ್ಿ ಸಮಾಜ ಸೇವಾ ಸಂಸ್ಥೆ ಐನಾಪುರ ಹಾಗೂ ಅಥಣಿ ಬ್ಲಡ್ ಬ್ಯಾಂಕ್ ಇವುಗಳ ಸಹಯೋಗದಲ್ಲಿ ಎರಡನೇ ಬಾರಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ರಕ್ತದ ಕೊರತೆಯಿಂದ ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದಾರೆ.ವಿಜ್ಞಾನ, ತಂತ್ರಜ್ಞಾನೆಷ್ಟೇ ಮುಂದುವರೆದಿದ್ದರೂ ಮನುಷ್ಯನ ಜೀವ ಉಳಿಸಲು ಮನುಷ್ಯನೇ ಬೇಕು. ರಕ್ತದಾನದಿಂದ ಉತ್ತಮ ಆರೋಗ್ಯ ಸಿಗುವುದರ ಜೊತೆಗೆ ಹೊಸ ಚೈತನ್ಯವೂ ಸಿಗುತ್ತದೆ ಎಂದು ಹೇಳಿದರು.
ಡಾ. ಆನಂದ ಮುತಾಲಿಕ ಬೇರೊಬ್ಬರ ಜೀವದ ಬೆಲೆ ತಿಳಿಯಬೇಕಾದರೆ ತಮ್ಮ ಜೀವನದ ಬೆಲೆ ಗೊತ್ತಿರಬೇಕು. ಇತ್ತೀಚಿನ ದಿನಗಳಲ್ಲಿ ಜನರಿಗೆ ಜೀವದ ಬೆಲೆ ತಿಳಿಯುತ್ತಿದ್ದುದರಿಂದಲೇ ರಕ್ತದಾನ ಮಾಡಲು ದಾನಿಗಳು ಮುಂದಾಗುತ್ತಿದ್ದಾರೆ.ಅಂತಹ ದಾನಿಗಳನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಯುವ ಜನತೆ ರಕ್ತದಾನಕ್ಕೆ ಸ್ವಯಂ ಪ್ರೇರಿತರಾಗಿ ಮುಂದೇ ಬಂದರೂ ಪೋಷಕರು ತಡೆಯುತ್ತಿದ್ದಾರೆ. ಅದಕ್ಕೆ ಅವರಲ್ಲಿನ ಅರವಿನ ಕೊರತೆಯೇ ಕಾರಣವಾಗಿದ್ದು, ಯುವಕರು ರಕ್ತದಾನದಿಂದಾಗುವ ಉಪಯೋಗಗಳ ಬಗ್ಗೆ ಅರಿವು ಮೂಡಿಸಿ ರಕ್ತದಾನಕ್ಕೆ ಮುಂದಾಗಬೇಕೆಂದರು. ಅತಿಥೀಗಳಾಗಿ ಕೆ.ಆರ್.ಈ ಸಂಸ್ಥೆಯ ಖಜಾಂಚಿ ಉದಯಕುಮಾರ ನಿಡಗುಂದಿ, ಮೆಹಬೂಬ್ ನನದಿ, ಸಂಜಯ ಭಿರಡಿ, ಗುರುರಾಜ ಮಡಿವಾಳರ, ಶರದ ಹುಯಿಲಗೋಳ, ಉಪಸ್ಥಿತರಿದ್ದು ಮಾತನಾಡಿದರು.
ಈ ವೇಳೆ, ವಿಶ್ವನಾಥ ಜೋಷಿ, ಭರತೇಶ ದಾನೊಳ್ಳಿ, ಶಿವಾನಂದ ಕೋಬರ್ು, ಅಶೋಕ ಭೋಸಗಿ, ಈಶ್ವರ ಭೋವಿ, ಸುರೇಶ ಶೇಡಶ್ಯಾಳೆ, ವಿಠ್ಠಲ ಕುರುಂದವಾಡ, ರಾಜು ಕಟಾವಿ, ಛೋಟು ಪಾಟೀಲ, ಸೇರಿದಂತೆ ಹಲವಾರು ಯುವಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 