ಜೀವ ವೈವಿಧ್ಯತೆಯ ರಕ್ಷಣೆ ಅಗತ್ಯ: ಚೌಗಲಾ

Biodiversity needs to be protected: Chowgala

ಜೀವ ವೈವಿಧ್ಯತೆಯ ರಕ್ಷಣೆ ಅಗತ್ಯ: ಚೌಗಲಾ 

ಬೆಳಗಾವಿ 07: ಪ್ರಕೃತಿಯಲ್ಲಿರುವ ಜೀವ ವೈವಿಧ್ಯತೆಯನ್ನು ಕಾಪಾಡಿ ಭವಿಷ್ಯದ ತಲೆಮಾರಿಗೆ ಆರೋಗ್ಯಕರ ಪರಿಸರವನ್ನು ಉಳಿಸಿಕೊಡುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕ ಎಂ.ಎಸ್‌.ಚೌಗಲಾ ಅಭಿಪ್ರಾಯಪಟ್ಟರು. 

 ನಗರದ ಬಸವಣ ಕುಡಚಿಯಲ್ಲಿರುವ ಶಕ್ತಿಸದನ ಮಹಿಳಾ ಪುನರ್ವಸತಿ ಕೇಂದ್ರ ಹಾಗೂ ಚಿನ್ನಮ್ಮ. ಬಿ. ಹಿರೇಮಠ ವೃದ್ಧಾಶ್ರಮದಲ್ಲಿ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.  

ಮರನೆಡುವುದು ಜಲಸಂರಕ್ಷಣೆ ನೀರಿನ ಸಂಗ್ರಹ ಪ್ಲ್ಯಾಸ್ಟಿಕ ಬಳಕೆ ತಡೆ ವಿದ್ಯುತ್ ಮತ್ತು ಇಂಧನ ಉಳಿತಾಯದ ಬಗ್ಗೆ ಮಾಹಿತಿ ನೀಡಿದರು. ಮನೆ ಮನೆಯಿಂದ ಪರಿಸರ ಸಂರಕ್ಷಣೆ ಆರಂಭವಾಗಬೇಕು, ಮಕ್ಕಳು ಯುವಕರು ಹಾಗೂ ಪ್ರಜ್ಞಾವಂತ ಸಮಾಜ ಈ ಕಾರ್ಯಕ್ರಮದಲ್ಲಿ ಮುಂದಾಗಬೇಕೆಂದರು. 

ಶಕ್ತಿ ಸದನ ಯೋಜನೆಯ ಸಂಯೋಜಕಿ ಸುರೇಖಾ ಪಾಟೀಲ, ಆರ್‌.ಜೆ. ಚೇತನ ಜಾನಕಿ, ಅಲ್ಲಾಭಕ್ಷ ಉಪಸ್ಥಿತರಿದ್ದರು. ವನಮಹೋತ್ಸವ ಸಂದರ್ಭದಲ್ಲಿ ಆವರಣದಲ್ಲಿ 50ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.