ಹಡಪದ ಅಪ್ಪಣ್ಣ ಸಮಾಜದ ಸರಕಾರಿ ಸೌಲಭ್ಯಕ್ಕಾಗಿ ಬೈಕ ರ್ಯಾಲಿ
Bike rally for government facilities for the Hadapad Appanna community
ಶಿಗ್ಗಾವಿ 19 : ತಾಲೂಕಿನ ಕ್ಷೌರಿಕರಿಗೆ ಸರಕಾರದಿಂದ ಸಿಗುವ ಸರಕಾರಿ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಪಟ್ಟಣದ ವ್ಯಾಪ್ತಿಯಲ್ಲಿ 21 ರಂದು ಶನಿವಾರ ಬೈಕ ರ್ಯಾಲಿಯನ್ನು ಏರಿ್ಡಸಲಾಗಿದೆ ಎಂದು ತಾಲೂಕ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ ಎಂದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ವರದಿಗಾರರೊಂದಿಗೆ ಮಾತನಾಡಿದ ಅವರು ಪುರಸಭೆ ವ್ಯಾಪ್ತಿಯಲ್ಲಿ ಕುಟೀರ ಹಾಗೂ ಗ್ರಾಮೀಣ ಭಾಗದಲ್ಲಿ ಪಂಚಾಯತ ಜಾಗದಲ್ಲಿ ಕುಟೀರ, ಆರೋಗ್ಯ್ ಜೀವ ವಿಮೆ ಹಾಗೂ ವಾಸಿಸಲು ನೀವೇಶನ ಪಿಂಚಣಿ ಯೋಜನೆ ಕ್ಷೌರಿಕರ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ವಿಶೇಷ ಹಾಸ್ಟೆಲ್ ಸೌಲಭ್ಯ ಹಾಗೂ ಕ್ಷೌರಿಕ ಅಂಗಡಿ ಕಟ್ಟಿಕೊಳ್ಳಲು ಸಾಲ ಸೌಲಭ್ಯ ಸರ್ಕಾರ ದಿಂದ ಕ್ಷೌರಿಕ ಸಾಮಾಗ್ರಿಗಳು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ 21 ಶನಿವಾರದಂದು ಬೈಕ್ ರ್ಯಾಲಿ ಮೂಲಕ ಶಿಗ್ಗಾವಿ ನಗರದ ದ್ಯಾಮವ್ವನ ಪದಗಟ್ಟಿ ಪ್ರಾರಂಭಿಸಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಹೊಸ ಬಸ್ ನಿಲ್ದಾಣ ಮಾರ್ಗವಾಗಿ ತಹಸೀಲ್ದಾರ್ ಆಫೀಸಗೆ ತೆರಳಿ ಮನವಿ ಅರ್ಿಸಲಾಗುವುದು ಎಂದರು. ಈ ಬೈಕ್ ರ್ಯಾಲಿಗೆ ಹಡಪದ ಅಪ್ಪಣ್ಣ ಸಮಾಜ ಹಾಗೂ ಸವಿತಾ ಸಮಾಜದ ವೃತ್ತಿ ಬಾಂದವರು ಹೆಚ್ಚಿನ ಸಂಖ್ಯೆಯೆಲ್ಲಿ ಭಾಗವಹಿಸಿ ಬೈಕ್ ರ್ಯಾಲಿ ಏಶಸ್ವಿ ಗೊಳಿಸಲು ಕರೆ ಕೊಟ್ಟದ್ದಾರೆ.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ, ಕಾರ್ಯಧ್ಯಕ್ಷ ಮಂಜುನಾಥ ಕ್ಷೌರದ, ಉಪಾಧ್ಯಕ್ಷ ಈರ್ಪ ಹಡಪದ, ಶಹರ ಘಟಕ ಅಧ್ಯಕ್ಷ ವಿರೇಶ ಹಡಪದ, ತಾಲೂಕ ಕಮಿಟಿಯ ನಿರ್ದೇಶಕರಾದ ದೇವಪ್ಪ ಮಡ್ಲಿಕರ, ಬಸವರಾಜ ಕ್ಷವರದ, ಪ್ರಮೋದ ಮುಗಳಿ, ಶಿವರಾಜ್ ಹಡಪದ, ಮಂಜುನಾಥ ಓಣಿಮನಿ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 