ಮಾತೃಪ್ರೇಮ ಮೆರೆದ ಪೊಲೀಸಮ್ಮರಿಗೆ ಬಿಗ್ ಸೆಲ್ಯೂಟ್
ಲೋಕದರ್ಶನ ವರದಿ
ವಿಜಯರ 11: ಇತ್ತೀಚೆಗೆ ಬೆಂಗಳೂರಿನ ಅರ್ಚನಾ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗೆ ಸಿಕ್ಕ ನವಜಾತ ಶಿಶುವಿಗೆ ಹತ್ತು ತಿಂಗಳ ಬಾಣಂತಿಯಾಗಿರುವ ಸಂಗೀತಾ ಹಳಿಮನಿ ಎಂಬ ಯಲಹಂಕ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಅನಾಥ ನವಜಾತ ಶಿಶುವಿಗೆ ತಮ್ಮ ಎದೆಹಾಲುಣಿಸಿ ಮಾನವೀಯತೆ ತೋರಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯವರಾಗಿದ್ದು, ಮೂರು ವರ್ಷದ ಹಿಂದೆ ಪೊಲೀಸ್ ಇಲಾಖೆಗೆ ಸೇರಿದ್ದಾರೆ. ಈಕೆಗೆ ಹತ್ತು ತಿಂಗಳ ಮಗುವಿದೆ.
ಜಿಕೆವಿಕೆ ಸಮೀಪದಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದೆಯೆಂಬ ಮಾಹಿತಿ ದೊರೆಯುತ್ತಿದ್ದಂತೆ ಸಂಗೀತಾ ಸೇರಿದಂತೆ ಇನ್ನಿತರ ಪೊಲೀಸರು ಸ್ಥಳಕ್ಕೆ ಬಂದರು. ಮಾತೃಪ್ರೇಮ ವಂಚಿತವಾಗಿ ರೋಧಿಸುತ್ತಿದ್ದ ನವಜಾತ ಶಿಶುವನ್ನು ತನ್ನ ಎದೆಗವಚಿಕೊಂಡ ಈ ಮಹಾತಾಯಿ ಆ ಮಗುವಿಗೆ ಹಾಲುಣಿಸಿ ಸಂತೈಸಿದರು. ಸಂಗೀತ ಅವರ ಆರೈಕೆಯ ನಂತರ ನವಜಾತ ಅನಾಥ ಶಿಶು ಚೇತರಿಸಿಕೊಂಡಿದ್ದು, ವಾಣಿ ವಿಲಾಸ ಆಸ್ಪತ್ರೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಹಾಗೆಯೇ ಕರುಣೆಯಿಲ್ಲದ ತಾಯಿಯೊಬ್ಬರು ತನ್ನ ಮುದ್ದಾದ ನವಜಾತ ಶಿಶುವನ್ನು ಹೀಗೆ ಅನಾಥವಗಿ ಬಿಟ್ಟುಹೋಗಿದ್ದಾರೆ ಇದು ಹೆಣ್ತನಕ್ಕೆ ಶಾಪ. ಮುಂದೆ ಇಂತಹ ಕೃತ್ಯಕ್ಕೆ ಯಾರೂ ಮುಂದಾಗಬಾರದೆಂದು ಸಂಗೀತಾ ಮನವಿ ಮಾಡಿಕೊಂಡಿದ್ದಾರೆ. ಅನಾಥ ನವಜಾತ ಶಿಶುಗಳಿಗೆ ತಮ್ಮ ಎದೆಹಾಲುಣಿಸಿ ಮಾತೃಪ್ರೇಮ ಹಾಗೂ ಮಾನವೀಯತೆ ಮೆರೆದ ಅರ್ಚನಾ, ಸಂಗೀತಾ ಪೊಲೀಸಮ್ಮರ ಕಾರ್ಯವನ್ನು ರಾಜ್ಯ ಗೃಹ ಸಚಿವ ಎಂ.ಬಿ ಪಾಟೀಲ ಬಹುವಾಗಿ ಶ್ಲಾಘಿಸಿದ್ದಾರೆ. ಅಂತೆಯೇ ನಾವೂ ಈ ಮಾತೃಪ್ರೇಮ ಮೆರೆದ ಮಾನವೀಯ ಮಿಡಿತವುಳ್ಳ ಈ ಪೊಲೀಸಮ್ಮರಿಗೆ ಬಿಗ್ ಸೆಲ್ಯೂಟ್ ಹೊಡೆಯಲೇಬೇಕಲ್ಲವೇ.
ಅಂತರರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ 2026ರಲ್ಲಿ ಚಿನ್ನದ ಪದಕಗಳ ಸಾಧನೆ ಮಾಡಿದ ಭಾರತೀಯ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಶಾಸಕರ ಆಮಿಷ ಆರೋಪದ ಕಾನೂನು ನೋಟಿಸ್ ಬಳಿಕ ಬಿಜೆಪಿ ನ್ಯಾಯಾಲಯದ ಮೂಲಕ ರಾಜಕೀಯ ಹೋರಾಟ ನಡೆಸುತ್ತಿದೆ ಎಂದು ಒಮರ್ ಅಬ್ದುಲ್ಲಾ ಆರೋಪ
ಮಧುರೈ ಸಮೀಪ ಓಮ್ನಿ ಬಸ್–ಟಿಎನ್ಎಸ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಐವರು ಸಾವು, 42 ಮಂದಿಗೆ ಗಾಯ
ಆರೋಪಿತ ರೌಡಿ ಶೀಟರ್ ಜನ್ಮದಿನಾಚರಣೆಯಲ್ಲಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಭಾಗಿ; ಕರ್ನಾಟಕದಲ್ಲಿ ರಾಜಕೀಯ ವಿವಾದ
ಮಾಹಿತಿ ಹಕ್ಕು ಕಾಯ್ದೆ ದುರ್ಬಲಕ್ಕೆ ಯತ್ನ: ಆಯುಕ್ತರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಕಾನೂನು ಹೋರಾಟ, ಗಾಡಾದ ಎಚ್ಚರಿಕೆ
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ 