ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥಿಸಿ ಭಜನೆ, ಪೂಜಾ ಕಾರ್ಯಕ್ರಮ
Bhajan and puja rituals at Sri Kalmeshwara Temple to pray for rain
ನೇಸರಗಿ 15: ಮಳೆಗಾಗಿ ಪ್ರಾರ್ಥಿಸಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ದಿ. 14 ರಂದು ರಾತ್ರಿ ಗ್ರಾಮದ ಎಲ್ಲ ಭಜನಾ ಮಂಡಳಿಗಳಿಂದ ಮಳೆಗಾಗಿ ಪ್ರಾರ್ಥಿಸಿ ಭಕ್ತಿ ಭಜನೆ ಜಾಗರಣೆ ನೆರವೇರಿದವು. ಮತ್ತು ದಿ. 15 ರಂದು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿಗೆ ಪೂಜಾ ಕಾರ್ಯಕ್ರಮ, ಗಂಗಾ ಪೂಜೆ,ಗಣಪತಿ ಪೂಜೆ, ಉಮಾಮಹೇಶ್ವರರ ಪೂಜೆ ಹಾಗೂ ಮಹಾರುದ್ರಾಭಿಷೇಕ, ಶತ ನಾಮಾವಳಿ,ಮಹಾ ಮಂಗಳಾರತಿ, ಮಹಾಪ್ರಸಾದ ವಿಶೇಷವಾಗಿರುವಂತಹ ಕಾರ್ಯಕ್ರಮಗಳು ಜರುಗಿದವು.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವೇದಬ್ರಹ್ಮ ವಿಶ್ವನಾಥ ಗುರೂಜಿ ವಹಿಸಿದ್ದರು. ಸಂಗಪ್ಪ ಗುಜನಟ್ಟಿ, ಮಹದೇವ ಕಾರಜೋಳ,ಮಲ್ಲಪ್ಪ ಗುಜನಟ್ಟಿ, ಸಿದ್ದಯ್ಯ ಚರಂತಿಮಠ, ಗುರುಪಾದಯ್ಯ ಚರಂತಿಮಠ,ಮಹಾಂತೇಶ ಮರಿಯಪ್ಪನವರ,ಬಸಪ್ಪ ಕಗ್ಗಣಗಿ,ಜಗದೀಶ ಕರಡಿ, ಬಸವರಾಜ ಕಾರಜೋಳ,ಬಸವರಾಜ ಹಾತರಕಿ, ಈರಣ್ಣ ಮೂಲಿಮನಿ,ಗಂಗಪ್ಪ ಗಲಿಬಿ ಮಲ್ಲಿಕಾರ್ಜುನ ಸೋಮಣ್ಣನವರ ಹಾಗು ಗ್ರಾಮದ ಎಲ್ಲ ಸಮಾಜದ ಜನತೆ ಪಾಲ್ಗೊಂಡು ಆ ಭಗವಂತನಲ್ಲಿ ಮಳೆಗಾಗಿ ಪ್ರಾರ್ಥಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 