ಬ್ಯಾಡಗಿ08:ಕೋವಿಡ್-19 ಕೊರೊನಾ ಹಿನ್ನೆಲೆಯಲ್ಲಿ ತಾಲೂಕಿನಲ್ಲಿರುವ ನಿರಾಶ್ರಿತರು, ನಿರ್ಗತಿಕರು ಹಾಗೂ ವಲಸಿಗ ಕಾಮರ್ಿ ಕರ ಬಗ್ಗೆ ಮಾಹಿತಿ ಇಲ್ಲದ ಅಧಿಕಾರಿಗಳ ಬೇಜವಾಬ್ದಾರಿ ಕಾರ್ಯವೈಖರಿಗೆ ಬುಧವಾರ ತಹಶೀಲ್ದಾರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಬೇಸರ ವ್ಯಕ್ತಪಡಿಸಿದ ಘಟನೆ ನಡೆಯಿತು.
ವಿಷಯದ ಕುರಿತು ಮಾತನಾಡಿದ ಅವರು,ಹಿಂದಿನ ಸಭೆಯಲ್ಲಿಯೇ ತಾಲೂಕಾಡಳಿತ, ತಾಲ್ಲೂಕ ಪಂಚಾಯತ್, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಪುರಸಭೆ ಮುಖ್ಯಾಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು ಇದರಲ್ಲಿ ಬ್ಯಾಡಗಿ ಪಟ್ಟಣ ಸೇರಿದಂತೆ ನಿರಾಶ್ರಿತರು, ನಿರ್ಗತಿಕರು ಹಾಗೂ ವಲಸಿಗ ಕಾಮರ್ಿಕರನ್ನು ಗುತರ್ಿಸುವ ಕುರಿತು ಸೂಚಿಸಲಾಗಿತ್ತು.
ಮಾಹಿತಿ ನೀಡಲು ತಡಕಾಡಿದ ಅಧಿಕಾರಿಗಳು:ನಿರಾಶ್ರಿತರ ಹಾಗೂ ನಿರ್ಗತಿಕರ ವರದಿಯನ್ನು ನೀಡಲು ಅಧಿಕಾರಿಗಳು ತಡಕಾ ಡಿದಾಗ, ಮದ್ಯ ಪ್ರವೇಶಿಸಿ ಮಾತನಾಡಿದ ಶಾಸಕರು, ಸೂಚನೆಗಳಿದ್ದಾಗ್ಯೂ ಸಹ ನಿರಾಶ್ರಿತರ ಬಗ್ಗೆ ಮಾಹಿತಿ ತಮ್ಮ ಬಳಿಯಿಲ್ಲ ಸಕರ್ಾರದ ಪರವಾಗಿ ಮುಖ್ಯಮಂತ್ರಿಗಳು ಪ್ರತಿ ಕುಟುಂಬಕ್ಕೂ ರೂ.25 ಸಾವಿರ ಮೌಲ್ಯದ ಕಿಟ್ ನೀಡುವುದಾಗಿ ಘೋಷಿಸಿ ದ್ದು ತಾಲೂಕಿನಲ್ಲಿ ಯಾರಿಗೆ ನೀಡಬೇಕೆಂಬುದು ಅರ್ಥವಾಗುತ್ತಿಲ್ಲ ಎಂದರು.
ಲೈಸನ್ಸ್ ಇದ್ದವರಷ್ಟೇ ಕೋಳಿ ಮಾರಾಟ:ಪಟ್ಟಣದ ವ್ಯಾಪ್ತಿಯಲ್ಲಿ ಪುರಸಭೆಯಿಂದಲೂ ಗ್ರಾಮೀಣ ಪ್ರದೇಶದಲ್ಲಿ ಪಂಚಾಯತ್ ಕಚೇರಿಯಿಂದಲೂ ಅನುಮತಿ(ಸ್ಲಾಟರ್ಲೈಸೆನ್ಸ್)ಪಡೆದುಕೊಂಡರವಷ್ಟೇ ಕೋಳಿಮಾಂಸ ಮಾರಾಟಕ್ಕೆ ಅನುಮತಿ ನೀಡಬೇಕು, ಪಟ್ಟಣದ ಸಂತೆ ಮೈದಾನದಲ್ಲಿ ಅಧೀಕೃತ ಮಾರಾಟ ಕೇಂದ್ರದಲ್ಲಿ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಶರಣಮ್ಮ ಕಾರಿ, ಟಿಇಓ ಅಬಿದ್ ಗದ್ಯಾಳ, ಸಮಾಜ ಕಲ್ಯಾಣಾಧಿಕಾರಿ ಪುಂಡಲೀಕ ಮಾನವರ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಗೀತಾ ಕುಂದಾಪೂರ ಸೇರಿದಂತೆ ತಾಲೂಕಿನ ಎಲ್ಲ ಪಿಡಿಓಗಳು ಹಾಗೂ ಇನ್ನಿತರ ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.