ಬಳ್ಳಾರಿ: ವಿಜೃಂಭಣೆಯಿಂದ ನಡೆದ ವಾಸವಿ ಜಯಂತಿ
ಬಳ್ಳಾರಿ 14: ಪ್ರತಿ ವರ್ಷದಂತೆ ಈ ವರ್ಷವು ಕನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ವಾಸವಿ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ಆಚರಿಸಿದರು. ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ 12 ಗಂಟೆಯವರೆಗೆ ವಾಸವಿ ಹೋಮ ಮತ್ತು ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಲಕ್ಷ ಕುಂಕುಮಾರ್ಚನೆ, ಮಹಾ ಮಂಗಳಾರತಿ, ನಂತರ ಪ್ರಸಾದ ವಿನಿಯೋಗ ನಡೆಯಿತು. ನಂಜೆ 6:30 ರಿಂದ 9 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆದವು. ಜಿಲಾನಿಬಾಷಾ ಅವರಿಂದ ಮಕ್ಕಳ ನೃತ್ಯಕಾರ್ಯಕ್ರಮ ಜನರ ಆಕರ್ಷಣೆಯಾಗಿತ್ತು.
ಮೆರವಣಿಗೆಯಲ್ಲಿ ನಾಗಸ್ವರ, ಗೊಂಬೆಗಳ ಕುಣಿತ, ಮಹಿಳೆಯರ ವೀರಗಾಸೆ, ಮತ್ತು ಬ್ಯಾಂಡ್ ವಾದ್ಯಗಳೊಂದಿಗೆ ಮಹಿಳೆಯರ ನೃತ್ಯ ಮತ್ತು ಆಡುಗಳ ಮೂಲಕ ಮೆರವಣಿಗೆ ಸಾಗಿತು. ಈ ವಾಸವಿ ಜಯಂತಿ ಕಾರ್ಯಕ್ರಮ ನಡೆಸಲು ಶ್ರೀ ಕನಿಕಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಆರ್ಯವೈಶ್ಯ ಅಸೋಸಿಯೆಷನ್, ನಗರೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ವಾಸವಿ ಕಲ್ಯಾಣ ಮಂಟಪ, ವಾಸವಿ ಎಜುಕೇಷನ್ ಟ್ರಷ್ಟ್ ಮತ್ತು ಆರ್ಯವೈಶ್ಯಗಳ ಎಲ್ಲಾ ಸಂಘಗಳು ಈ ಒಂದು ಜಯಂತಿಗೆ ಸಹಕರಿಸಿದ್ದು ಈ ಉತ್ಸವದ ನೇತೃತ್ವವನ್ನು ಸ್ವಂತ ಗಿರಿಧರ್ ಮತ್ತು ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವಾಸವಿ ಇಂಟರ್ ನ್ಯಾಷನಲ್ಕ್ಲಬ್ ವತಿಯಿಂದ ರಕ್ತಧಾನ ಶಿಬಿರವನ್ನು ಏರ್ಪಡಿಸಿದ್ದು ನೂರಕ್ಕೂ ಹೆಚ್ಚು ಜನ ರಕ್ತಧಾನ ಮಾಡಿದರು. ಬೈರಾಪುರ ನಾರಾಯಣ ಶೆಟ್ಟಿ, ಮ್ಯಾನೆಜ್ಮೆಂಟ್ಗೆ ಟ್ರಷ್ಟ್ನವರ ನೇತೃತ್ವದಲ್ಲಿ ಪರಮನೆಂಟ್ ಜ್ವಯಿನ್ ಟ್ರಷ್ಟ್ ಟಿ.ಗೋವಿಂದಯ ಶೆಟ್ಟಿ, ಗಾದೆಂ ಗೋಪಾಲ ಕೃಷ್ಣ, ವಿಠ್ಠ ಕೃಷ್ಣಾಕುಮಾರ ಶೆಟ್ಟಿ, ಟಿ ಅಶ್ವತ್ ನಾರಾಯಣ ಶೆಟ್ಟಿ, ಜಯಂತಿ ಕಿಶೋರ್ ಕುಮಾರ, ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು ಹಾಗೂ ಡಾ.ರಮೇಶ್ ಗೋಪಾಲ, ಜಯಪ್ರಕಾಶ್ ಜೆ.ಗುಪ್ತಾ, ನಾಮ ರಮೇಶ್, ನಾಮಾ ನಾಗರಾಜ, ವಿಠ್ಠ ಆನಂದ್, ಸೇರಿದಂತೆ ಸಂಘದ ಇನ್ನೂ ಅನೇಕ ಪ್ರಮುಖರು ದೇವಸ್ಥಾನದ ಗರ್ಭಗುಡಿಯಲ್ಲಿರುವ ದೇವಿಗೆ ವಿಶೇಷ ಪೂಜೆಯನ್ನು ನಡೆಸಿಕೊಟ್ಟರು. 102 ಗೋತ್ರದ ಆರ್ಯವೈಶ್ಯ ಬಂದುಗಳ ಸಹಕಾರದಿಂದ ಈ ವಾಸವಿ ಜಯಂತಿಯು ಅತೀ ವಿಜೃಂಭಣೆಯಿಂದ ನಡೆಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 