ಬಳ್ಳಾರಿ :ವಾಸವಿ ಜಯಂತಿ: ವಿವಿಧ ಅಲಂಕಾರ ಸಾಂಸ್ಕೃತಿಕ ಕಾರ್ಯಕ್ರಮ
ಬಳ್ಳಾರಿ 12: ನಗರದ ಬೆಂಗಳೂರು ರಸ್ತೆಯಲ್ಲಿರುವ ಕನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಬರುವ 14 ರಂದು ವಾಸವಿ ಜಯಂತಿಯ ಅಂಗವಾಗಿ ಕನಿಕಾ ಪರಮೇಶ್ವರಿ ದೇವಿಗೆ ದಿನನಿತ್ಯ ಒಂದೊಂದು ವಿವಿದ ಭಗೆಯ ಅಲಂಕಾರಗಳನ್ನು ಮಾಡುತ್ತಿದ್ದಾರೆ. ಅಲ್ಲದೇ ದಿನನಿತ್ಯ ಸಂಜೆ ಗಾಯನ, ಸಂಗೀತ, ಪುರಾಣ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ವೈಶ್ಯ ಸಮೂದಾಯದ ಮಹಿಳೆಯರಿಂದ ಕೋಲಾಟ ಪ್ರದರ್ಶನವನ್ನು ಹಮ್ಮಿಕೊಂಡಿದ್ದರು.
ಜೊತೆಗೆ ಮಕ್ಕಳಿಂದ ನೃತ್ಯಪ್ರದರ್ಶನವನ್ನು ರೂಪಿಸಿದ್ದು ಸಾಹಸ್ರಾರು ವೈಶ್ಯ ಸಮೂದಾಯದ ವಿಕ್ಷಕರಿಂದ ಮನೋರಂಜನೆಯನ್ನು ರಂಜಿಸಿದರು. ಕೊನೆಗೆ ದೇವಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯುತ್ತದೆ. ಬಂಗಾರ ಕಚಿತ ಆಭರಣಗಳನ್ನು ಸಿಂಗರಿಸಿ ಹೂವಿನ ಅಲಂಕಾರದೊಂದಿಗೆ ಜನ ಆಕರ್ಷಣೆಯಾಗಿ ಭಕ್ತರ ಮನಸನ್ನು ಆಕಷರ್ಿಸಿಸಿತ್ತು. ಅಂತಯೇ ನಸುಕಿನ ಜಾವ ವಿಶೇಷ ಅಭಿಷೇಕ ಮಾಡುವ ಮೂಲಕ ಅಲಂಕಾರವನ್ನು ಮಾಡಿ ಮಹಿಳೆಯರಿಂದ ಕಳಸದೊಂದಿಗೆ ದೇವಿಯ ವಿಗ್ರವನ್ನು ಮೆರವಣಿಗೆಯ ಮುಖಾಂತರ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಯುತ್ತದೆ. ನಂತರ ಮಹಾಮಂಗಳಾರತಿಯೊಂದಿಗೆ ಪ್ರಸಾದ ವ್ಯೆವೆಸ್ಥೆಯನ್ನು ಮಾಡಲಾಗಿದೆ.
ಈ ಕಾರ್ಯಕ್ರಮಕ್ಕೆ ಕುಲಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಕೋರಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 