ಬಳ್ಳಾರಿ: ಗೃಹಮಂಡಳಿ ಮನೆ ಬೆಲೆ ಬಾಳುವ ವಸ್ತುಗಳ ಕಳ್ಳತನ
ಲೋಕದರ್ಶನ ವರದಿ
ಬಳ್ಳಾರಿ 07: ನಗರದ ಹೊರವಲಯದಲ್ಲಿ ನಿಮರ್ಿಸಿರುವ ಕರ್ನಾಟಕ ಗೃಹ ಮಂಡಳಿಯ ಮಾದರಿಯ 50 ಮನೆಗಳ ಪೈಕಿ 5 ಮನೆಯಲ್ಲಿ ಕಳ್ಳತನ ನಡೆದಿರುವ ಗಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಆಂಧ್ರಾಳ ಹತ್ತಿರ ಕರ್ನಾಟಕ ಗೃಹಮಂಡಳಿ ನಿಮರ್ಾಣ ಮಾಡಿರುವ ಮಾದರಿಯ 50 ಮನೆಗಳ ಪೈಕಿ 5 ಮನಗಳ ಕಿಡಕಿ ಗ್ರೀಲ್ ಮುರಿದು ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ದೋಚಿದ್ದಾರೆ.
ಜೊತೆಗೆ ಮನೆಯಲ್ಲಿರುವ ಪ್ಲಮ್ಮಿಂಗ್ ವಸ್ತುಗಳನ್ನು ದ್ವಂಸ ಮಾಡಿದ್ದಾರೆ. ಸರಿ ಸುಮಾರು 2 ಲಕ್ಷ ರೂ ಮೆಲ್ಮಟ್ಟ ವಸ್ತುಗಳ ಕಳ್ಳತನವಾಗಿದೆ. ಈ ಗಟನೆ ಸೋಮುವಾರ ರಾತ್ರಿ ವೇಳೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಇತ್ತೀಚಿನ ದಿನದಲ್ಲಿ ಗೃಹಮಂಡಳಿ ಸಾರ್ವಜನಿಕರಿಗೋಷ್ಕರ ನಿವಾಸಿಗಳ ಪ್ಲಾಟ್ ಗಳನ್ನು ನಿಮರ್ಿಸಿದೆ. ಮನೆಗಳು ಮಾರಾಟವಾಗಿದ್ದರೂ ಮೂಲಬೂತ ಸೌಕರ್ಯ ಒದಗಿಸಲು ಗೃಹಮಂಡಳಿ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಮನೆ ಖರೀದಿ ಮಾಡಿದ ಗ್ರಾಹಕರು ವಾಸಮಾಡಲು ಸಾದ್ಯವಾಗದ ಕಾರಣದಿಂದಾಗಿ ಯಾರೂ ಮನೆಗಳಲ್ಲಿ ಬರುತ್ತಿಲ್ಲ. ಅದಕ್ಕಾಗಿ ಈ ಪ್ರದೇಶದಲ್ಲಿ ಸೂಕ್ತ ರೀತಿಯ ಭದ್ರತೆ ಇಲ್ಲದ ಕಾರಣದಿಂದ ಇಂತಹ ಅವಗಡಗಳು ನಡೆಯುತ್ತಿವೆ. ಈಗಲಾದರೂ ಗೃಹಮಂಡಳಿಯ ಅಧಿಕಾರಿಗಳು ಇತ್ತಕಡೆ ಎಚ್ಚೆತ್ತುಕೊಂಡು ಭದ್ರತೆ ಕಲ್ಪಿಸುವ ಮೂಲಕ ಅಲ್ಲಿಯ ನಿವಾಸಿಗಳಿಗೆ ಅಭಯವನ್ನು ನಿಡುತ್ತಾರಾ ಎಂದು ಜನರು ಆಶಿಸುತ್ತಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 