ಬಳ್ಳಾರಿ: ಶಿವನ ಪೂಜೆ ನೆರವೇರಿಸಿದ ಜನಾರ್ಧನರೆಡ್ಡಿ
ಲೋಕದರ್ಶನ ವರದಿ
ಬಳ್ಳಾರಿ 13: ಮಾಜಿ ಸಚಿವ, ಸಮಾಜ ಸೇವಕ ಗಾಲಿ ಜನಾರ್ಧನರೆಡ್ಡಿ ಅವರು ಸುಪ್ರೀಂಕೋರ್ಟ್ ಅನುಮತಿಮೇರೆಗೆ ಬಳ್ಳಾರಿ ನಗರಕ್ಕೆ ಎರಡು ವಾರಗಳ ಕಾಲ ಆಗಮಿಸಿದ್ದು ಈ ದಿನ ಗಂಗಾದಶಮಿಯಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರು.
ತಾಲೂಕಿನ ವೇಣಿವೀರಾಪುರ ಗ್ರಾಮದ ಬಳಿ ಇರುವ ಶಿವಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ ಅವರು ಹೋಮ, ಹವನ, ಯಜ್ಞ ಕಾರ್ಯಗಳನ್ನು ನೆರವೇರಿಸಿದರು. ಜೇಷ್ಠ ಮಾಸದ ಅಂಗವಾಗಿ ಶಿವನಿಗೆ ಸಹಸ್ರನಾಮಾರ್ಚನೆ ನೆರವೇರಿಸುವ ಮೂಲಕ ವಿಶೇಷ ಪ್ರಾರ್ಥನೆ ಮಾಡಿದರು. ಶಿವನಿಗೆ ಬಿಲ್ವಪತ್ರ ಸಮರ್ಪಣೆ, ಅಭಿಷೇಕಾದಿಗಳನ್ನು ಸಲ್ಲಿಸಿ ಭಕ್ತಿಯಿಂದ ಶಿವನಿಗೆ ಪ್ರಾಥರ್ಿಸಿದರು. ನಾಡಿನಲ್ಲಿ ಬರ ನೀಗಿ ಎಲ್ಲೆಡೆ ವರುಣನ ಪ್ರಾಪ್ತಿಯಾಗಲಿ. ರೈತಾಪಿ ವರ್ಗ, ದುಡಿಯುವ ವರ್ಗದವರಿಗೆ ಶಿವನ ಅನುಗ್ರಹ ದೊರೆತು ಸುಖ, ಶಾಂತಿ, ಸಮೃದ್ಧಿ ದೊರೆಯಲಿ ಎಂದು ಪ್ರಾರ್ಥಿಸಿದರು
ಈ ವೇಳೆ ತಮ್ಮ ಅನುಯಾಯಿಗಳೊಂದಿಗೆ ಶಿವ ತತ್ವದ ಕುರಿತು ಧಾಮರ್ಿಕವಾಗಿ ಮಾತನಾಡಿದ ರೆಡ್ಡಿ ಅವರು, ಶಿವ ಎಂಬ ಎರಡಕ್ಷರ ಮೋಕ್ಷಕ್ಕೆ ದಾರಿ. ಸದಾ ಧ್ಯಾನಾಸಕ್ತನಾಗಿರುವ ಶಿವನನ್ನು ಪೂಜಿಸಿದರೆ ರೋಗ ರುಜಿನ, ಕೇಡು, ದುಃಖ, ಭಯ, ದಾರಿದ್ರ್ಯ ಭೂತ ಪ್ರೇತಗಳ ಕಾಟ ದೂರವಾಗುತ್ತವೆ ಎಂದು ಶರಣರು ಸಾರಿದ್ದಾರೆ. ಶಿವನನ್ನು ಸ್ತುತಿಸಿ ಭಜಿಸಿದರೆ ಅಪಮೃತ್ಯು ಪರಿಹಾರವಾಗಿ, ಅಶಾಂತಿ ದೂರವಾಗಿ ಜೀವನದಲ್ಲಿ ಯಾರು ಬೇಕಾದರೂ ಆಯುಷ್ಯ, ಆರೋಗ್ಯ, ಐಶ್ವರ್ಯ, ಜೀವನ್ಮುಕ್ತಿ ಹೊಂದಬಹುದೆಂದು ಅನುಭಾವಿಗಳು ಹೇಳಿದ್ದಾರೆ ಎಂದು ಭಾವುಕರಾಗಿ ನುಡಿದರು.
ಈ ವೇಳೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಬಿಜೆಪಿ ಮುಖಂಡರಾದ ಕೃಷ್ಣಾರೆಡ್ಡಿ, ಶಿವಾಲಯದ ಅರ್ಚಕರು, ಭಕ್ತ ವೃಂದ ಸೇರಿದಂತೆ ಹಲವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 