ಬಸವ ಪರಿಸರ ಸಂರಕ್ಷಣಾ :ಅಂಬೇಡ್ಕರವರ 134ನೇ ಜಯಂತಿ

Basava Environmental Protection: Ambedkar's 134th Birth Anniversary

 ಬಸವ ಪರಿಸರ ಸಂರಕ್ಷಣಾ :ಅಂಬೇಡ್ಕರವರ 134ನೇ ಜಯಂತಿ 

ಹುಬ್ಬಳ್ಳಿ 14: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ ಅವರ 134ನೇ ಜಯಂತಿ ಅಂಗವಾಗಿ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಆಯೋಜಿಸಿದ್ದ ಗೌರವ ಅರೆ​‍್ಣ ಕಾರ್ಯಕ್ರಮದಲ್ಲಿ  ಡಾ. ಬಿ.ಆರ್‌.ಅಂಬೇಡ್ಕರ ಅವರ ಪ್ರತಿಮೆಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ. 

 ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು ಮಾಲಾರೆ​‍್ಣ ಮಾಡಿ, ಗೌರವ ಸಮರೆ​‍್ಣ ಮಾಡಿದರು. ಸೋಹನ ಸುರೇಶ ಹೊರಕೇರಿ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ಸಾಹಿತಿ ಪ್ರೊ ಎಸ್‌.ಎಂ.ಸಾತ್ಮಾರ,  ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ವೈದ್ಯ ಡಾ. ಬಸವಕುಮಾರ ತಲವಾಯಿ, ಕಲ್ಲಪ್ಪ ಗುಂಜಾಳ, ಮುಂತಾದವರು ಇದ್ದರು. ಡಾ. ಬಿ.ಆರ್‌.ಅಂಬೇಡ್ಕರ ಅವರ ಜೀವನ ಹಾಗೂ ಸಾಧನೆ, ಭಾರತದ ಸಂವಿಧಾನ ರಚನೆಯಲ್ಲಿ ಅವರ ಪಾತ್ರ ಕುರಿತು ನುಡಿಗಳ ಮೂಲಕ ಗುಣಗಾನ ಮಾಡಿದರು.