ಬ್ಯಾಂಕ್ ವಂಚನೆ ಪ್ರಕರಣ: 5.11 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ
cash
ನವದೆಹಲಿ, ನ.27- ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್ಎ)ಯಡಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಂತಿ ಕುಮಾರ್ ಚೋರ್ಡಿಯಾ, ಉಮರಾವ್ ಮಾಲ್ ಚೋರ್ಡಿಯಾ ಮತ್ತು ನಯನತಾರ ಚೋರ್ಡಿಯಾ ಅವರಿಗೆ ಸೇರಿದ 5.11 ಕೋಟಿ ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಜೈಪುರದ ಮೂರು ವಸತಿ ಮತ್ತು ಬಿಸಿನೆಸ್ ಮನೆಗಳು, ಮುಂಬೈನ ಐಷಾರಾಮಿ ಪ್ರದೇಶದಲ್ಲಿರುವ ಫ್ಲಾಟ್ ಮತ್ತು ಜೈಪುರದ ಎಸ್ಬಿಐನಲ್ಲಿ 1.31 ಕೋಟಿ ರೂ.ಗಳ ನಿಶ್ಚಿತ ಠೇವಣಿ ಸೇರಿದಂತೆ 3.80 ಕೋಟಿ ಮೌಲ್ಯದ ನಾಲ್ಕು ಸ್ಥಿರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಬುಧವಾರ ತಿಳಿಸಿದೆ.
ಶಾಂತಿ ಕುಮಾರ್ ಚೋರ್ಡಿಯಾ, ಉಮರಾವ್ ಮಾಲ್ ಚೋರ್ಡಿಯಾ, ವಿಪುಲ್ ಜೆಮ್ಸ್ ಪ್ರೈವೇಟ್ ಲಿಮಿಟೆಡ್ ಜೈಪುರ, ಕೆವಿ ಎಕ್ಸ್ಪೋರ್ಟ್ಸ್, ಜೈಪುರ ಮತ್ತು ವಿಪುಲ್ ವಿರುದ್ಧ ಮುಂಬೈಯ ಸಿಬಿಐ ಎಫ್ಐಆರ್ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ಜೈಪುರದ ಜಾರಿ ನಿರ್ದೇಶನಾಲಯ ಈ ಕ್ರಮಕೈಗೊಂಡಿದೆ.
ಈ ಸಂಸ್ಥೆಗಳು ಬ್ಯಾಂಕಿಗೆ ಮೋಸ ಮಾಡಿವೆ ಮತ್ತು ಅಪರಾಧದ ಉದ್ದೇಶದಿಂದ ಅಪ್ರಾಮಾಣಿಕವಾಗಿ ಮತ್ತು ಮೋಸದಿಂದ ಬ್ಯಾಂಕ್ ಸಾಲದ ಮೊತ್ತವನ್ನು ವಸೂಲಿ ಮಾಡುವುದಕ್ಕೆ ತಡೆ ಒಡ್ಡಿದೆ. ಹೀಗಾಗಿ ಬ್ಯಾಂಕ್ಗೆ 30 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿಪುಲ್ ಜೆಮ್ಸ್ ಪ್ರೈವೇಟ್ ಲಿಮಿಟೆಡ್, ವಿಪುಲ್ ಜೆಮ್ಸ್ ಮತ್ತು ಕೆ.ವಿ. ಎಕ್ಸ್ಪೋರ್ಟ್ ಸಂಸ್ಥೆಗಳು ಬೆಲೆಬಾಳುವ ಕಲ್ಲುಗಳನ್ನು ರಫ್ತು ಮಾಡುವ ಕಂಪನಿಗಳಾಗಿವೆ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 