ಫೆ, 27 ರಿಂದ ಬಬಲಾದಿ ಸದಾಶಿವ ಮುತ್ಯಾನ ಮಠದ ಜಾತ್ರೆ
Babaladi Sadashiva Muthyana Matha fair from 27th Feb
ಜಮಖಂಡಿ 21: ತಾಲ್ಲೂಕಿನ ಆಲಗೂರ ಪುನರ್ವಸತಿ ಕೇಂದ್ರದ ಹೊಸ ಬಬಲಾದಿ ಸದಾಶಿವ ಮುತ್ಯಾನ ಮಠದ ಜಾತ್ರೆಯು ಫೆ, 27 ರಿಂದ ಮಾರ್ಚ್ 1 ರವರೆಗೆ ಜಾತ್ರೆಯು ಅದ್ದೂರಿಯಾಗಿ ಜರುಗಲಿದೆ ಎಂದು ಮಠ ಪೂಜ್ಯರಾದ ಶಿವರುದ್ರಯ್ಯ ಅಜ್ಜನವರು ತಿಳಿಸಿದರು.
ಹೊಸ ಬಬಲಾದಿ ಸದಾಶಿವ ಮುತ್ಯಾನ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆ, 27 ರಂದು ಸಾಯಂಕಾಲ 4 ಗಂಟೆಗೆ ಸದಾಶಿವ ಮುತ್ಯಾರ ಭಾವಚಿತ್ರ ಬನಶಂಕರಿ ತೋಟದ ವಿಠ್ಠಲ ಮಂದಿರದಿಂದ ಜಮಖಂಡಿ ನಗರದ ಪ್ರಮುಖ ರಸ್ತೆಯ ಮೂಲಕ ಕುಂಭಮೇಳ, ಆರತಿ ಹಾಗೂ ಸಕಲ ವಾದ್ಯಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಯುವುದು. ನಂತರ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಾ ಶಿವರಾತ್ರಿ ಉಸಾಸನೆ, ರಾತ್ರಿ ಶಿವಭಜನೆ ಜರುಗುಲಾಗುವದು. 28 ರಂದು ಮುಂಜಾನೆ 8 ಗಂಟೆಗೆ ಮಠದಲ್ಲಿ ಮಹಾ ರುದ್ರಾಭಿಷೇಕ, ಸಿವಧಿಕ್ಷೇ, ರಾತ್ರಿ 8 ಗಂಟೆಗೆ ರಥೋತ್ಸವ ಹಾಗೂ ತುಲಾಭಾರ ನಡೆಯುತ್ತದೆ. ಮಾರ್ಚ್ 1 ರಂದು ಮುಂಜಾನೆ 10 ಗಂಟೆಗೆ ಮಹಾಪ್ರಸಾದ, ತ್ರಿಕಾಲ ಜ್ಞಾನದ ಕಾಲಜ್ಞಾನ ನುಡಿ ಸಾರುವುದು. ತೆರೆಬಂಡಿ ಸ್ಪರ್ಧೆ ಜರುಗುತ್ತದೆ. ಹಾಗೂ ದನಗಳ ಜಾತ್ರೆಯು ಸಹ ನಡೆಯುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಾತ್ರೆಯ ಬೀತಿಪತ್ರಗಳನ್ನು ಬಿಡುಗೊಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಠದ ಪೂಜ್ಯರಾದ ಸದಾಶಿವ ಅಜ್ಜನವರು ಹಾಗೂ ಮಠದ ಭಕ್ತರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 