ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಯರಗಟ್ಟಿ,17; ಸವದತ್ತಿ ಯಲ್ಲಮ್ಮನ ವಿಧಾನ ಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಬಿಜೆಪಿ ಸದಸ್ಯತ್ವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಸವದತ್ತಿ ಮಂಡಳ ಅಧ್ಯಕ್ಷ ವಿರೂಪಾಕ್ಷ ಮಾಮನಿ ಹೇಳಿದರು. 

ಪಟ್ಟಣದ ಅಜೀತಕುಮಾರ ದೇಸಾಯಿ ಅವರ ಗೃಹ ಕಚೇರಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೆಪ್ಟೆಂಬರ್ 25ರವರೆಗೆ ಮೊದಲ ಹಂತದ ಸದಸ್ಯತ್ವ ನೋಂದಣಿ ನಡೆಯಲಿದ್ದು, ಅಕ್ಟೋಬರ್ 1 ರಿಂದ 2ನೇ ಹಂತದ ನೋಂದಣಿ ಆರಂಭವಾಗಲಿದೆ ಎಂದು ಹೇಳಿದರು. 

ಪ್ರತಿಯೊಂದು ಬೂತ್‌ನಲ್ಲಿ ಮೂವರು, ನಾಲ್ವರು ಕಾರ್ಯಕರ್ತರನ್ನು ಜೋಡಿಸುವ ಕೆಲಸ ಆಗಲಿದೆ. ಪ್ರತಿ ತಾಲೂಕಿನಲ್ಲಿ ಸದಸ್ಯತ್ವ ಅಭಿಯಾನಕ್ಕೆ ಒಬ್ಬ ಮಂಡಳ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದರು. 

ಬಿಜೆಪಿ ಜನರಿಗೆ ಸ್ಪಂದಿಸುವ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದೆ.  ಎಲ್ಲರೂ ಸಂಕಷ್ಟದಲ್ಲಿದ್ದಾಗ ಬಿಜೆಪಿ ಕಾರ್ಯಕರ್ತರು ಮನೆಯಲ್ಲಿ ಕೂರದೆ ಜನರ ಸಂಕಷ್ಟಗಳಿಗೆ ಸ್ಪಂದಿಸಿದರು. ಎಂದು ಜಿಲ್ಲಾಧ್ಯಕ್ಷ ಸುಭಾಷಗೌಡ ಪಾಟೀಲ ಹೇಳಿದರು. 

ಈ ಸಂದರ್ಭದಲ್ಲಿ ಅಜೀತಕುಮಾರ ದೇಸಾಯಿ, ಬಸಯ್ಯ ಹಿರೇಮಠ, ವಿಠ್ಠಲ ಬಂಟನೂರ, ಮಹಾಂತೇಶ ಗೋಡಿ, ಚಂದ್ರಶೇಖರ ಅಳಗೋಡಿ, ಪುಂಡಲೀಕ ಮೇಟಿ, ಕುಮಾರ ಹಿರೇಮಠ, ವೆಂಕಟೇಶ ದೇವರಡ್ಡಿ, ಚೇತನ ಜಕಾತಿ, ಕೃಷ್ಣಮೂರ್ತಿ ತೊರಗಲ್, ಸದಾನಂದ ಪಾಟೀಲ, ಕರೆಪ್ಪ ಪೂಜೇರ, ಸುನೀಲ ಬೆಲ್ಲದ, ರವಿಕಿರಣ ಪಾಟೀಲ, ಮಹಾದೇವ ಯಂಡ್ರಾವಿ, ಈರಣ್ಣಾ ಪೂಜೇರ, ಮುದಕಪ್ಪ ತಡಸಲೂರ, ಆನಂದ ಬಾಗೋಡಿ, ಸೇರಿದಂತೆ ಅನೇಕರು ಬಿಜೆಪಿ ಕಾರ್ಯಕರ್ತೆಯರು ಮತ್ತು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಇದ್ದರು.