ಅಯೋಧ್ಯೆ,: ಮತ ಬೇಟೆಗೆ ಪ್ರಿಯಾಂಕಾರಿಂದ ಮತ್ತೊಂದು ಟೆಂಪಲ್ ರನ್ ..!!
ಅಯೋಧ್ಯೆ, ಮಾ, 25: ಪ್ರಯಾಗ್ ರಾಜ್ ನಿಂದ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿಯವರೆಗೆ ದೋಣಿಯ ಮೂಲಕವೇ ಗಂಗಾ ಯಾತ್ರೆ ಪೂರ್ಣ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇದೆ 27 ರಂದು ಅಯೋಧ್ಯೆಗೆ ಭೇಟಿ ನೀಡಿ ಮತ ಬೇಟೆಗಾಗಿ ಟೆಂಪಲ್ ರನ್ ಮಾಡುವ ಮೂಲಕ ಮೃದು ಹಿಂದುತ್ವ ಕಾರ್ಯಸೂಚಿ ಮುಂದುವರೆಸಲಿದ್ದಾರೆ.
ಪ್ರಿಯಾಂಕ ರೈಲಿನ ಮೂಲಕ ಅಯೋಧ್ಯೆಗೆ ಆಗಮಿಸುವ ಅವರು , ಹನುಮಾನ್ ಗಿರಿ ಮತ್ತು ಮತ್ತು ಬಿರ್ಲಾ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದ 2017 ರ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಅಯೋಧ್ಯೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರಂತೆ ರಾಮ್ ಲಾಲ್ಲಾ ತಾತ್ಕಾಲಿಕ ದೇವಸ್ಥಾನದಲ್ಲಿ ವಿವಾದಾಸ್ಪದ ಸ್ಥಳಕ್ಕೆ ಭೇಟಿ ನೀಡುವುದಿಲ್ಲ ಎನ್ನಲಾಗಿದೆ
ಪಾರ್ಟಿಗೆ ಹೊಸ ರೂಪ ಕೊಡುವ ಪ್ರಯತ್ನದಲ್ಲಿ ಕಾಂಗ್ರೆಸ್ ಪ್ರಭುತ್ವ ಈಗಾಗಲೇ ಪ್ರಯಾಗ್ ರಾಜ್ ಸಂಗಮ್ ತೀರದಲ್ಲಿ ನೆಲೆಗೊಂಡಿರುವ ಪ್ರಸಿದ್ದ 'ಬಾನ್ವವಾಲೆ ಹನುಮಾನ್ಜಿ ದೇವಸ್ಥಾನ' ಹಾಗೂ ವಿಂಧ್ಯಾಚಲ್ ದೇವಸ್ಥಾನ, ಸಿಟಮಾರಿ ದೇವಸ್ಥಾನ ಮತ್ತು ಇತ್ತೀಚೆಗೆ ವಾರಣಾಸಿಯಲ್ಲಿರುವ ಬಾಬಾ ವಿಶ್ವನಾಥ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.
ಮಾರ್ಚ್ 26 ರ ರಾತ್ರಿ ಪ್ರಿಯಾಂಕಾ ಅವರು ದೆಹಲಿಯಿಂದ ಕೈಫಾಯಿಟ್ ಎಕ್ಸ್ಪ್ರೆಸ್ ರೈಲಿನ ಮೂಲಕ ಫೈಜಾಬಾದ್ ಗೆ ಆಗಮಿಸಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಂತರ ಅವರು ಬುಧವಾರ ಹನುಮಾನ್ ಗಿರಿ ದೇವಸ್ಥಾನಕ್ಕೆ ಹಾಗೂ ಬಿರ್ಲಾ ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ ಪಕ್ಷದ ಮೂಲಗಳು ಯುಎನ್ಐ ಗೆ ತಿಳಿಸಿವೆ.
ನಂತರ , ತೆಹರಿ ಬಜಾರ್ ನಿಂದ ಶೋ ಮಾಡಲಿದ್ದಾರೆ , ರನೋಪಾಲಿ, ಅವಧಪುರಿ ಕಾಲನಿ, ಬೆನಿಗಂಜ್, ಸಹಭಗಂಜ್, ರಾಮ್ಜಂಕಿ ದೇವಸ್ಥಾನ, ಕಣ್ಣಿನ ಆಸ್ಪತ್ರೆ ಮೂಲಕ ರೋಡ್ ಶೋ ಸಾಗಲಿದೆ. ಬಳಿಕ , ಅವರು ಕೊಟ್ವಾಲಿ, ಟಾಪ್ ವಾಲಿ ಕೋತಿ, ಚೌಕ್, ಸುಭಾಷ್ ನಗರದಿಂದ ಫತೇಗಂಜ್ ಗೆ ಹೋಗಲಿದ್ದಾರೆ. ಫೈಜಾಬಾದ್ ಕ್ಷೇತ್ರದಿಂದ ಯುಪಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಿರ್ಮಲ್ ಖತ್ರಿ ಅವರು ಕಣಕ್ಕೆ ಇಳಿದಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 