ಬಳ್ಳಾರಿಯಲ್ಲಿ ನಾಯಿ ಕಡಿತ-ಹಾವು ಕಡಿತದ ಜನ ಜಾಗೃತಿ: ಡಾ.ಮರಿಯಂಬಿ
Awareness campaign on dog bites and snake bites in Bellary: Dr. Mariambi
ಬಳ್ಳಾರಿಯಲ್ಲಿ ನಾಯಿ ಕಡಿತ-ಹಾವು ಕಡಿತದ ಜನ ಜಾಗೃತಿ: ಡಾ.ಮರಿಯಂಬಿ
ಬಳ್ಳಾರಿ, 05: ನಾಯಿ ಕಚ್ಚಿದ ದಿನವೇ ಹತ್ತಿರದ ಸರ್ಕಾರಿಆಸ್ಪತ್ರೆಗೆ ಭೇಟಿ ನೀಡಿರೇಬಿಸ್ ರೋಗತಡೆಯುವ ಲಸಿಕೆ ಹಾಕಿಸಬೇಕು ಎಂದುಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಸಲಹೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾಘಟಕ, ಮಹಾನಗರ ಪಾಲಿಕೆ, ನಗರ ಪ್ರಾಥಮಿಕಆರೋಗ್ಯಕೇಂದ್ರ ಬಂಡಿಹಟ್ಟಿ- ಆಶ್ರಯ ಕಾಲೋನಿ ಇವರ ಸಂಯುಕ್ತಾಶ್ರಯದಲ್ಲಿ ಕೌಲ್ಬಜಾರ್ನದಾನಪ್ಪ ಸ್ಟ್ರೀಟ್ನಲ್ಲಿ ನಾಯಿ ಕಡಿತ ಹಾಗೂ ಹಾವು ಕಡಿತಕುರಿತು ಬುಧವಾರ ಏರಿ್ಡಸಿದ್ದ ಜನಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು. ಸಾಕಿದ ಅಥವಾ ಬೀದಿ ನಾಯಿ ಕಚ್ಚಿದರೆ, ಉಗುರಿನಿಂದಗಿರಿದರೆಅಥವಾ ನಮ್ಮ ಮೈಮೇಲೆ ಈಗಾಗಲೇ ಇರುವಗಾಯವನ್ನು ನಾಲಿಗೆಯಿಂದ ನೆಕ್ಕಿದರೆಅದನ್ನುನಿರ್ಲಕ್ಷ್ಯ ವಹಿಸುವಂತಿಲ್ಲ. ಹತ್ತಿರದ ಸರ್ಕಾರಿಆಸ್ಪತ್ರೆಯಲ್ಲಿವೈದ್ಯರ ಸಲಹೆಯಂತೆಲಸಿಕೆ ಪಡೆಯಬೇಕೆಂದರು. ಹಾವು ಕಚ್ಚಿದಾಗ ಗಾಬರಿಗೊಳ್ಳದೇ, ಕಚ್ಚಿರುವ ಭಾಗವು ಹೃದಯದ ಕೆಳಗೆ ಬರುವ ಹಾಗೆ ನಿಗಾವಹಿಸಿ ವ್ಯಕ್ತಿಯನ್ನು ಯಾವುದೇ ವಾಹನ ಅಥವಾ 108 ಅಂಬುಲೆನ್ಸ್ ಮೂಲಕ ಹತ್ತಿರದಆಸ್ಪತ್ರೆಗೆಕರೆದುಕೊಂಡು ಹೋಗಲು ಮೊದಲಆದ್ಯತೆ ನೀಡಬೇಕು. ವ್ಯಕ್ತಿಯ ರಕ್ತಪರಿಚಲನೆಗೆ ತಡೆಯಾಗುವಂತಹ ಕೈ ಗಡಿಯಾರ, ಬಳೆ, ಉಂಗುರ ಮುಂತಾದವುಗಳನ್ನು ತೆಗೆಯಬೇಕು. ಕಚ್ಚಿದಭಾಗವು ಅಲುಗಾಡದಂತೆ ನೋಡಿಕೊಳ್ಳಬೇಕು ಎಂದು ಆಶ್ರಯ ಕಾಲೋನಿ ವೈದ್ಯಾಧಿಕಾರಿ ಡಾ.ಕಾಶೀಪ್ರಸಾದ್ ಅವರುಜಾಗೃತಿ ಮೂಡಿಸಿದರು. ಹಾವು ಕಚ್ಚಿದಾಗಕಚ್ಚಿದಜಾಗದ ಪಕ್ಕದಲ್ಲಿ ಬಟ್ಟೆಯನ್ನುಕಟ್ಟುವುದು, ಬ್ಲೇಡ್ಅಥವಾ ಚಾಕುವಿನಿಂದಗಾಯ ಮಾಡುವುದು, ಗಾಯವನ್ನು ಸುಡುವುದು, ನಾಟಿ ಓಷಧಿಗಳನ್ನು ನೀಡುವುದು ಮುಂತಾದವುಗಳನ್ನು ಮಾಡಬಾರದುಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಸಾಂಕ್ರಾಮಿಕರೋಗತಜ್ಞರಾದಡಾ.ವಿಶಾಲಾಕ್ಷಿ, ತಂಬಾಕು ನಿಯಂತ್ರಣ ವಿಭಾಗದ ಸರಸ್ವತಿ, ಜಿಲ್ಲಾಕಾಲರಾನಿಯಂತ್ರಣತಂಡದ ಕೆ.ಎಮ್.ಶಿವಕುಮಾರ್, ತಿಪ್ಪೇಸ್ವಾಮಿ, ಉಮಾದೇವಿ, ಸವಿತಾ, ಖಾಸಿಂ ವಲಿ, ಹೆಚ್ಐಓ ಮಹಾಲಿಂಗ, ದುರ್ಗಾಪ್ರಸಾದ್, ಪಿಹೆಚ್ಸಿಓ ದಾನಕುಮಾರಿ, ಕೌಸರ್, ವಿಜಯಲಕ್ಷ್ಮೀ, ಸುಮಿತ್ರಾ, ರಾಧಿಕಾ ಸೇರಿದಂತೆ ಆಶಾ ಕಾರ್ಯಕರ್ತೆಯರು, ತಾಯಂದಿರು, ಸಾರ್ವಜನಿಕರು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 