ಅಥಣಿ: ಶ್ರವಣ ದೋಷ ಕುರಿತು ಬೀದಿ ನಾಟಕ
ಲೋಕದರ್ಶನ ವರದಿ
ಚಿಂಚಲಿ 03: ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆಯಿಂದ ಶ್ರವಣ ದೋಷ ನಿವಾರಣೆ ಕುರಿತು ಹಮ್ಮಿಕೊಂಡು ಜನರಿಗೆ ತಿಳುವಳಿಕೆ ಮೂಡಿಸಲು ಬೀದಿ ನಾಟಕ ಕಲಾವಿದರ ಮೊರೆ ಹೋಗಿ ಶ್ರವಣ ದೋಷ ನಿವಾರಣೆ ಕುರಿತು ಅಥಣಿ ತಾಲೂಕಿನ ಶಂಕರಹಟ್ಟಿ, ನದಿಇಂಗಳಗಾಂವ, ಹಲ್ಯಾಳ ಆಯ್ದ ಗ್ರಾಮಗಳಿಗೆ ಬೀದಿ ನಾಟಕ ಕಾರ್ಯಕ್ರಮ ಆಯೋಜಿಸಿ ಶ್ರವಣ ದೋಷ ಕುರಿತು ಜನರಿಗೆ ಜಾಗೃತಿ ಮೂಡಿಸಲಾಯಿತು.
ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಡಾ. ಅಂಬೇಡ್ಕರ ಜಾನಪದ ಕಲಾ ಪೋಷಕ ಸಂಘ ಚಿಂಚಲಿ ತಂಡದ ಕಲಾವಿದರಿಂದ ಆರೋಗ್ಯ ಇಲಾಖೆ ಐದು ತಾಲೂಕಿನಲ್ಲಿ ಆಯ್ದ ಗ್ರಾಮಗಳಿಗೆ ಆಯ್ಕೆ ಮಾಡಿದ ಕಲಾ ತಂಡಕ್ಕೆ ಕಾರ್ಯಕ್ರಮ ನೀಡಿ ಬೀದಿ ನಾಟಕ ಯಶಸ್ವಿಗೊಳಿಸಿದರು. ಆರೋಗ್ಯ ಇಲಾಖೆ ಆಯ್ಕೆ ಮಾಡಿ ಸೂಚಿದ ಗ್ರಾಮಗಳಿಗೆ ತೆರಳಿ ಕಾರ್ಯಕ್ರಮ ನೀಡಿದರು.
ಬೀದಿ ನಾಟಕ ತಂಡದ ಕಲಾವಿದರಾದ ರಾಮಚಂದ್ರ ಕಾಂಬಳೆ, ಪರಶುರಾಮ ಸಂಗಣ್ಣವರ, ಪ್ರಶಾಂತ ಕಾಂಬಳೆ, ಸಂತೋಷ ಕಾಂಬಳೆ, ಜಿನ್ನಪ್ಪ ಕಾಂಬಳೆ, ಶ್ಯಾಮಸುಂದರ ಬ್ಯಾಕುಡೆ, ಅಕ್ಕಮಹಾದೇವಿ ಜೋಕಾನಟ್ಟಿ, ಸರಸ್ವತಿ ಜೋಕಾನಟ್ಟಿ, ಚನ್ನಮಲ್ಲ ಕಾಂಬಳೆ ಅನೇಕ ಬೀದಿ ನಾಟಕ ಕಲಾವಿದರು ನಾಟಕದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗುಳೇದಾ, ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಮತ್ತು ಆಶಾ ಕಾರ್ಯಕತರ್ೆಯರು, ಅಂಗವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮದ ಮುಖಂಡರು, ಸಾರ್ವಜನಿಕರು, ವಿದ್ಯಾರ್ಥಿ, ವಿದ್ಯಾಥರ್ಿನಿಯರು ಬೀದಿ ನಾಟಕವನ್ನು ವೀಕ್ಷಿಸಿ ಹಮ್ಮಿಕೊಂಡ ಬೀದಿ ನಾಟಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 