ವಾಮಾಚಾರದ ಪರಿಣಾಮವಾಗಿ ಮನೆಗಳೆರಡು ಹೊತ್ತಿ ಉರಿದಿವೆ : ಕುಟುಂಬಸ್ಥರ ಆರೋಪ
ಲೋಕದರ್ಶನ ವರದಿ
ತಾಂಬಾ 14:ಬೆನಕನಹಳ್ಳಿ ಗ್ರಾಮದಲ್ಲಿ ವಾಮಾಚಾರದ ಪರಿಣಾಮವಾಗಿ ಮನೆಗಳೆರಡು ಹೊತ್ತಿ ಉರಿದ ಘಟನೆ ಶನಿವಾರರಂದು ನಡೆದಿದೆ ಎನ್ನಲಾಗುತ್ತಿದೆ.
ಬೆನಕನಹಳ್ಳಿ ಗ್ರಾಮದ ರಾಜಕುಮಾರ ಶರಣಪ್ಪ ಅಂಕಲಗಿ
ಎಂಬುವವರಿಗೆ ಸೇರಿದ ಎರಡೂ ಮನೆಗಳು ಸುಟ್ಟು ಭಸ್ಮವಾಗಿವೆ.
ಸುಮಾರು 15 ದಿನಗಳಿಂದ ಮನೆಯ ಒಂದಿಲ್ಲೊಂದು ಕಡೆ
ವಿಚಿತ್ರವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿತ್ತು. ಅಲ್ಲದೆ ಮನೆಯ ಬಳಿಯ ತೆಂಗಿನ ಮರ ಬೆವಿನ ಮರಗಳಲ್ಲಿಯೂ
ಬೆಂಕಿ ಕಾಣಿಸಿಕೊಂಡಿತ್ತು ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಹಾಗೂ ಗ್ರಾಮದ ಹಿರಿಯರನ್ನು ಕುಡಿಸಿ
ವಾಮಾಚರ ಮಾಡಲು ಕಾರಣಿಬೂತರಾದ ವೀರಭದ್ರಪ್ಪ ಅಂಕಲಗಿಯವರಿಗೆ ಹೇಳಿದರೂ ಮತ್ತೆ ನಮ್ಮ ಮನೆಯಮೇಲೆ ವಾಮಾಚಾರ
ಮಾಡಿದ್ದಾರೆ ಎಂದು ರಾಜಕುಮಾರ ಅಂಕಲಗಿಯವರು ಗಂಭಿರವಾಗಿ ಆರೋಪಿಸಿದ್ದಾರೆ.
ಮನೆಯಲ್ಲಿದ್ದ ಮೂರೂ ತೋಲಿ ಬಂಗಾರ 70 ಸಾವಿರ
ರೂಗಳು ದವಸ ದಾನ್ಯ ಬಟ್ಟೆಗಳು ಸುಟ್ಟು ಸಂಪೂರ್ಣ ಕರಕಲಾಗಿವೆ. ಹಾಗೂ ಎರಡು ಟೆಂಗಿನ ಮರಗಳು ಬೇವಿನಮರಗಳು
ಸುಟ್ಟುಹೋಗಿವೆ.
ಶನಿವಾರ ಬೆಳಿಗ್ಗೆಯೆ ಘಟನೆ ಸಂಭವಿಸಿದ್ದರೂ ಸ್ಥಳಕ್ಕೆ
ತಾಲೂಕಾ ಆಡಳಿತದ ಯಾವ ಸಿಬ್ಬಂದಿಯೂ ಭೇಟಿ ನೀಡದ ಪರಿಣಾಮ ಅಧಿಕಾರಿಗಳ ವಿರುದ್ದ ಕುಟುಂಬಸ್ಥರು ಆಕ್ರೋಶ
ಹೊರಹಾಕುತ್ತಿದ್ದಾರೆ.
ಈ ಘಟನೆಗೆ ವಾಮಾಚಾರವೇ ನೇರ ಕಾರಣ ಎಂದು ಕುಟುಂಬಸ್ಥರು
ಆರೋಪಿಸಿದ್ದಾರೆ. ನೀರಾಶ್ರೀತರಾದ ರಾಜಕುಮಾರ ಕುಟುಂಭಕ್ಕೆ ಸರಕಾರದಿಂದ ಪರಿಹಾರ ನೀಡಬೇಕು ಎಂದು ಗ್ರಾಮಸ್ತರು
ಆಗ್ರಹಿಸದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 