ನಗ-ನಾಣ್ಯ ದೋಚಿದ್ದ ಕಳ್ಳರ ಬಂಧನ
ಬೆಳಗಾವಿ, 27: ಭಾವಿ ಪತ್ನಿ ಜೊತೆ ಸುತ್ತಾಡುತ್ತಿದ್ದ ಓರ್ವ ಯುವಕನ ಮೇಲೆ ನಾಲ್ವರು ದಾಳಿ ನಡೆಯಿಸಿ 8 ಸಾವಿರ ನಗದು, 90 ಸಾವಿರ ಮೌಲ್ಯದ ಬಂಗಾರದ ಆಭರಣ ದೋಚಿದ್ದ ನಾಲ್ವರಲ್ಲಿ ಇಬ್ಬರನ್ನು ಕಾಕತಿ ಪೊಲೀಸರು ಬಂಧಿಸಿ ಅವರಿಂದ ನಗ-ನಾಣ್ಯ ವಶಪಡಿಸಿಕೊಂಡಿದ್ದಾರೆ.
ನ್ಯಾ ಗಾಂಧಿ ನಗರದ ಆಶೀಪ್ ಸಯ್ಯದ ಎಂಬುವವರು ತಮ್ಮ ಭಾವಿ ಪತ್ನಿ ಜೊತೆ ಭೂತರಾಮನಹಟ್ಟಿ ಗ್ರಾಮ ವ್ಯಾಪ್ತಿಯಲ್ಲಿ ಊಟಕ್ಕೆಂದು ಹೋಗಿ ಬರುತ್ತಿದ್ದಾಗ ನಾಲ್ವರು ಯುವಕರ ಗುಂಪು ದಾಳಿ ನಡೆಸಿ ಇಬ್ಬರ ಮೇಮೇಲಿರುವ ಬಂಗಾರ (90 ಸಾವಿರ ಮೌಲ್ಯದ) ಹಾಗೂ 8 ಸಾವಿರ ನಗದು ದೋಚಿದ್ದರು.
ಈ ಕುರಿತು ಕಾಕತಿ ಠಾಣೆಯಲ್ಲಿ ಪ್ರಕಟಣ ದಾಖಲಾಗಿದ್ದು ತೀವ್ರ ತನಿಖೆ ನಡೆಯಿಸಿದ್ದ ಪೊಲೀಸರು ಕೆಂಚಪ್ಪ ನಾಯಿಕ, ಲಗಮಪ್ಪ ನಾಯಿಕ ಎಂಬುವರನ್ನು ಬಂಧಿಸಿದ್ದಾರೆ. ಇನ್ನಿಬ್ಬರ ಅಪರಾಧಿಗಳ ಶೋಧ ನಡೆಯುತ್ತಿದೆ.
ಪೊಲೀಸ ಇನ್ಸ್ಪೆಕ್ಟರ್ ಎಸ್.ಎಸ್. ಕೌಜಲಗಿ ಇವರು ಪಿಎಸ್ಐ ಎಂ.ಜಿ. ಭಜಂತ್ರಿ ಹಾಗೂ ಸಿಬ್ಬಂದಿಯೊಂದಿಗೆ ದಾಳಿ ನಡೆಯಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆಯುಕ್ತರಾದ ಬಿ.ಎಸ್. ಲೋಕೇಶಕುಮಾರ ಇವರು ತಂಡದ ಕಾರ್ಯ ವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 