ಸ್ಟೇಷನ್ ಮಾಸ್ಟರ್ ಪರೀಕ್ಷೆಗೆ ಕನ್ನಡ ಭಾಷೆಯಲ್ಲಿಯೂ ಅವಕಾಶ ನೀಡದೇ ಕೇವಲ ಹಿಂದಿ ಇಂಗ್ಲೀಷ ಭಾಷೆಗಳಿಗೆ ಮಾತ್ರ ನೀಡಿದ್ದನ್ನು ಪ್ರತಿಭಟಿಸಿ ಮನವಿ

ಸ್ಟೇಷನ್ ಮಾಸ್ಟರ್ ಪರೀಕ್ಷೆಗೆ ಕನ್ನಡ ಭಾಷೆಯಲ್ಲಿಯೂ ಅವಕಾಶ ನೀಡದೇ ಕೇವಲ ಹಿಂದಿ ಇಂಗ್ಲೀಷ ಭಾಷೆಗಳಿಗೆ  ಮಾತ್ರ ನೀಡಿದ್ದನ್ನು ಪ್ರತಿಭಟಿಸಿ   ಮನವಿ Appeal protesting against the fact that the Station Master exam was only given in Hindi and English

ಸ್ಟೇಷನ್ ಮಾಸ್ಟರ್ ಪರೀಕ್ಷೆಗೆ ಕನ್ನಡ ಭಾಷೆಯಲ್ಲಿಯೂ ಅವಕಾಶ ನೀಡದೇ ಕೇವಲ ಹಿಂದಿ ಇಂಗ್ಲೀಷ ಭಾಷೆಗಳಿಗೆ  ಮಾತ್ರ ನೀಡಿದ್ದನ್ನು ಪ್ರತಿಭಟಿಸಿ   ಮನವಿ 

ರೇಲ್ವೆ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ಇರದೇ ಇರುವುದನ್ನು ಗಮನಿಸಿ ಕರ್ನಾಟಕ ವಿದ್ಯಾವರ್ಧಕ ಸಂಘವು ನೈಋತ್ಯ ರೇಲ್ವೆಯ ಜನರಲ್ ಮ್ಯಾನೇಜರಿಗೆ, ಸಂಸದ ಪ್ರಲ್ಹಾದ ಜೋಶಿಯವರಿಗೆ ಮನವಿಯನ್ನು ಸಲ್ಲಿಸಿ, ಸ್ಟೇಷನ್ ಮಾಸ್ಟರ್ ಪರೀಕ್ಷೆಗೆ ಕನ್ನಡ ಭಾಷೆಯಲ್ಲಿಯೂ ಅವಕಾಶ ನೀಡದೇ ಕೇವಲ ಹಿಂದಿ ಇಂಗ್ಲೀಷ ಭಾಷೆಗಳಿಗೆ  ಮಾತ್ರ ನೀಡಿದ್ದನ್ನು ಪ್ರತಿಭಟಿಸಿ ಇಂದು ಮನವಿ ಸಲ್ಲಿಸಲಾಯಿತು.  

ರಾಜ್ಯ ರೇಲ್ವೆ ಸಚಿವರು ದಿನಾಂಕ 6 ರಂದು ನಗರಕ್ಕೆ ಆಗಮಿಸುತ್ತಿದ್ದು ಅವರಿಗೂ ಮನವಿ ಸಲ್ಲಿಸಲು ನಿರ್ಧರಿಸಿದೆ. ಕನ್ನಡಕ್ಕೆ ಆದ್ಯತೆ ನೀಡದಿದ್ದರೆ ಅನಿವಾರ್ಯವಾಗಿ ಸಂಘವು ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದೆ.  

ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ನೇತೃತ್ವದಲ್ಲಿ ಮಹೇಂದ್ರ ಸಿಂಘೆ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ಡಾ. ಜಿನದತ್ತ ಹಡಗಲಿ, ವೀರಣ್ಣ ಒಡ್ಡೀನ, ಪ್ರಶಾಂತ ಪಾಟೀಲ ಭಾಗವಹಿಸಿದ್ದರು.