ಬೆಳಗಾವಿ 23: ಕಾಶ್ಮೀರದ ಪೆಹಲ್ಗಾಮನಲ್ಲಿ ಇಸ್ಲಾಮಿಕ್ ಭಯೋತ್ಪಾದಕ ರಾಕ್ಷಸರಿಂದ ಹಿಂದೂಗಳ ಹತ್ಯೆ ಅತ್ಯಂತ ಹೇಯ ಕೃತ್ಯ ಖಂಡನೀಯ. ಭಯೋತ್ಪಾದಕರನ್ನು ಬುಡಸಮೇತ ನಿರ್ನಾಮ ಮಾಡಬೇಕೆಂದು ಆಗ್ರಹಿಸಿ ಕೇಂದ್ರ ಗ್ರಹಮಂತ್ರಿಗಳಿಗೆ ಶ್ರೀರಾಮ ಸೇನೆ ಬೆಳಗಾವಿ ಮನವಿ ಅರ್ಿಸಿತು.
ಮನವಿಯಲ್ಲಿ ಭಯೋತ್ಪಾದಕರ ಈ ಹೇಯ ಕೃತ್ಯ ನಾಗರಿಕ ಸಮಾಜಕ್ಕೆ ಎಸುಗಿದ ಘೋರ ಕೃತ್ಯ. ಇಂಥ ಉಗ್ರರನ್ನು ಯಾವುದೇ ಮುಲಾಜಿಲ್ಲದೆ ಹೊಡೆದುರುಳಿಸಲು ಶ್ರೀರಾಮ ಸೇನೆ ಆಗ್ರಹಿಸುತ್ತದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನರು ದಂಗೆ ಏಳುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ತಿಳಿಸಿದೆ.
ಮನವಿ ಅರ್ಪಣೆ ಕಾಲಕ್ಕೆ ಉತ್ತರ ಕರ್ನಾಟಕದ ಲವ್ಜಿಹಾದ್ ಪ್ರಮುಖ ರವಿ ಕೋಕಿತಕರ, ಬಿಭಾಗೀಯ ಅಧ್ಯಕ್ಷ ವಿನಯ ಅಂಗ್ರೋಳ್ಳಿ, ಜಿಲ್ಲಾಧ್ಯಕ್ಷ ವಿಠ್ಠಲ ಗಡ್ಡಿ ಸೇರಿದಂತೆ ಅನೇಕ ಸಂಘಟನೆಯ ಕಾರ್ಯಕರ್ತರು ಇದ್ದರು.